ಆಲೆಟ್ಟಿ ಸದಾಶಿವ ದೇವಸ್ಥಾನದ ಶಾಶ್ವತ ಚಪ್ಪರಕ್ಕೆ ಕೋಲ್ಚಾರು ಗಣೇಶೋತ್ಸವ ಸಮಿತಿ ವತಿಯಿಂದ 1.50 ಲಕ್ಷ ದೇಣಿಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಹೊರಾಂಗಣದ ಶಾಶ್ವತ ಚಪ್ಪರಕ್ಕೆ ಕೋಲ್ಚಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ರೂ.1.50 ಲಕ್ಷ ದೇಣಿಗೆಯನ್ನು ಗಣೇಶೋತ್ಸವದ ಸಂದರ್ಭದಲ್ಲಿ ನೀಡಲಾಯಿತು.

ತಂತ್ರಿವರ್ಯರಾದ ವೇದವ್ಯಾಸ ತಂತ್ರಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಹರೀಶ್ ಕೊಯಿಂಗಾಜೆ, ಸತೀಶ್ ಕೊಯಿಂಗಾಜೆ,ಅಧ್ಯಕ್ಷ ಮಾಲಿಂಗ ಕಣಕ್ಕೂರು, ಶ್ರೀಧರ ಕೊಯಿಂಗಾಜೆ ಕಮಲಾಕ್ಷ ಕೊಯಿಂಗಾಜೆ, ಕರುಣಾಕರ ಹಾಸ್ಪಾರೆ, ಸೀತಾರಾಮ ಕೊಲ್ಲರಮೂಲೆ, ಧರ್ಮಪಾಲ ಕೊಯಿಂಗಾಜೆ, ದಯಾನಂದ ಪಾತಿಕಲ್ಲು, ಸತೀಶ್ ಕುಂಭಕೋಡು ರಾಮಚಂದ್ರ ಆಲೆಟ್ಟಿ, ಪ್ರಣೀತ್ ಕಣಕ್ಕೂರು, ಧನು ಕೋಲ್ಚಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.