ಸುದ್ದಿ ಬಿಡುಗಡೆ ಮತ್ತು ಷರಾ ಪ್ರಕಾಶನದ ಆಶ್ರಯದಲ್ಲಿ ದೇಶ ಭಕ್ತಿ ‌ಗಾಯನ ಸ್ಪರ್ಧೆ

0

ದ್ವಿತೀಯ ಸ್ಥಾನ ಪಡೆದ ಎಲಿಮಲೆ ಜ್ಞಾನದೀಪ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸುದ್ದಿ ಸಮೂಹ ಸಂಸ್ಥೆ ಸುಳ್ಯ‌ ಮತ್ತು ಷರಾ ಪ್ರಕಾಶನ‌ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ “ದೇಶ ಭಕ್ತಿ ಗೀತೆ ಗಾಯನ” ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಎಲಿಮಲೆ ಜ್ಞಾನದೀಪ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೆ. 11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ‌

ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಯಶ್ವಿತ್ ಕಾಳoಮನೆ ಸ್ಪರ್ಧೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದ್ದಿ ವರದಿಗಾರ ಶಿವರಾಮ ಕಜೆಮೂಲೆ, ಶ್ರೀಜಿತ್ ಸಂಪಾಜೆ, ಶಿಕ್ಷಕಿ ಗೌತಮಿ , ಹೇಮಲತಾ , ಉಷಾ ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಸ್ವಾಗತಿಸಿ,ವಂದಿಸಿದರು.