ಓಡಬಾಯಿ: ಶ್ರೀದೇವಿ ಅಸೋಸಿಯೇಟ್ಸ್ ನವರ ವಾಹನ ಇನ್ಶೂರೆನ್ಸ್ ಮತ್ತು ವಾಯುಮಾಲಿನ್ಯ ತಪಾಸಣಾ ಕೇಂದ್ರ ಶುಭಾರಂಭ

0

ಸುಳ್ಯದ ಓಡಬಾಯಿಯ ಅಗ್ನಿಶಾಮಕ ಇಲಾಖೆಯ ಮುಂಭಾಗವಿರುವ ಕಾಂಪ್ಲೆಕ್ಸ್ ನಲ್ಲಿ ಶ್ರೀದೇವಿ ಅಸೋಸಿಯೇಟ್ಸ್ ನವರ ವಾಹನ ಇನ್ಶೂರೆನ್ಸ್ ಮತ್ತು ವಾಯುಮಾಲಿನ್ಯ ತಪಾಸಣಾ ಕೇಂದ್ರ ಪುರೋಹಿತ ನಾಗರಾಜ್ ಭಟ್ ರವರ ಪೌರೋಹಿತ್ಯದಲ್ಲಿ ಗಣಪತಿ ಹವನ ದೊಂದಿಗೆ ಸೆ.12ರಂದು ಆರಂಭಗೊಂಡಿತು.

ನೂತನ ಸಂಸ್ಥೆಯನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇದರ ಧರ್ಮದರ್ಶಿಗಳಾದ ಹರೀಶ್ ರವರು ಉದ್ಘಾಟಿಸಿ , ಶುಭ ಹಾರೈಸಿದರು

ಶ್ವೇತಾ ಜೆರಾಕ್ಸ್ ನ ಮಾಲಕ ವಿಠಲ
ರೈ, ಪಂಚಶ್ರೀ ಅಸೋಸಿಯೇಟ್ ಪುತ್ತೂರ ಇದರ ಮಾಲಕ ಪ್ರವೀಣ್, ಬಿಲ್ಡಿಂಗ್ ಮಾಲಕರು ಸೇರಿದಂತೆ ಹಿತೈಷಿಗಳು ಉಪಸ್ಥಿತರಿದ್ದರು.

ಇಲ್ಲಿ ವಾಹನ ವಿಮೆ, ಅರೋಗ್ಯ ವಿಮೆ, ಕಲರ್ ಪ್ರಿಂಟ್, ಜೆರಾಕ್ಸ್ ಸೌಲಭ್ಯವಿದ್ದು, ಜನರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.