ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

0

1 ಕೋಟಿಯ 64 ಲಕ್ಷ ನಿವ್ವಳ ಲಾಭ

ಸದಸ್ಯರಿಗೆ ಶೇ.8.5 ಡಿವಿಡೆಂಡ್ ವಿತರಣೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.

ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ರಾದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ. ವರದಿ ಮಂಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕ ರಾದ ಬೆಳ್ಯಪ್ಪ ಗೌಡ ಬಿ.ಕೆ., ಎ.ವಿ.ತೀರ್ಥರಾಮ, ಕೇಶವ ಭಟ್ ಮುಳಿಯ, ಮಂಜುಳಾ ಮುತ್ಲಾಜೆ, ರವಿಪ್ರಕಾಶ್ ಬಳ್ಳಡ್ಕ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ಚಂದ್ರಾ ವತಿ ಮುಂಡೋಡಿ, ಕುಂಞ ಬಳ್ಳಕ, ಆನಂದ ಹಲಸಿನಡ್ಕ ಉಪಸ್ಥಿತರಿದ್ದರು.

ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ 2023-24ನೇ ಸಾಲಿನಲ್ಲಿ 1 ಕೋಟಿಯ 64 ಲಕ್ಷದ 18 ಸಾವಿರ ನಿವ್ವಳ ಲಾಭ ಬಂದಿದೆ. ಸದಸ್ಯರಿಗೆ ಶೇ‌8.5 ಡಿವಿಡೆಂಡ್ ವಿತರಿಸಲಾಗುವುದು ಎಂದು ಘೋಷಿಸಿದರು.
ವರದಿಯ ಮೇಲೆ ಚರ್ಚೆ ನಡೆದು ಅನುಮೋದನೆ ಪಡೆಯಲಾಯಿತು.

ಸಹಕಾರಿ ಸಂಘದಲ್ಲಿ ದಿನಕೂಲಿ ನೌಕರನಾಗಿ, ಖಾಯಂ ಗುಮಾಸ್ತರಾಗಿ, ಲೆಕ್ಕಿಕರಾಗಿ ಬಳಿಕ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಒಟ್ಟು 41 ವರ್ಷದಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ಕುಮಾರ್ ಸಿ.ಎಚ್. ದಂಪತಿಗಳನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ಹಾಗೂ ಸಂಸ್ಥೆಯಲ್ಲಿ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಕೇಶವ ಭಟ್ ಮುಳಿಯ, ರತ್ನಾ ಎಂ.ಡಿ. ಮುಂಡೋಡಿ, ಮುಳಿಯ ತಿಮ್ಮಪ್ಪಯ್ಯ, ಅತೀ ಹೆಚ್ಚು ಕೊಕ್ಕೊ ಮಾರಾಟ ಮಾಡಿದ ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ ಭಟ್ ಚನಿಲ, ರಘುನಾಥ ಮುತ್ಲಾಜೆ, ಅತಿ ಹೆಚ್ಚು ಗೊಬ್ಬರ ಖರೀದಿ ಮಾಡಿದ ಮುಳಿಯ ತಿಮ್ಮಪ್ಪಯ್ಯ, ರಾಮಚಂದ್ರ ಪಳಂಗಯ, ರತ್ನಾವತಿ ಡಿ.ಆರ್., ಅತೀ ಹೆಚ್ಚು ಡಿಸೇಲ್ ಮತ್ತು ಪೆಟ್ರೋಲ್ ಖರೀದಿಸಿದ ರಾಧಾಕೃಷ್ಣ ಎಲಿಮಲೆ, ಚಲನ್ ಕೊಪ್ಪಡ್ಕ, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಹಾಗೂ ಅತೀ ಹೆಚ್ಚು ದಿನಸಿ ಖರೀದಿಸಿದ ಶಿವಪ್ರಕಾಶ್ ಕಡಪಾಲ, ಶ್ಯಾಮ್ ಪ್ರಸಾದ್ ಎಂ., ದಯಾನಂದ ಮುತ್ಲಾಜೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.