ಬೆಳ್ಳಾರೆ ಜ್ಞಾನದೀಪದಲ್ಲಿ ಓಣಂ ಆಚರಣೆ

0


ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಓಣಂ ಆಚರಣೆ ನಡೆಯಿತು. ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಆಕರ್ಷಕ ಪೂಕಳಂ ರಚಿಸಿ, ತಿರುವಾದಿರ ನೃತ್ಯ ಪ್ರದರ್ಶನ ನೀಡಿದರು. ಬೆಳ್ಳಾರೆ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕಿ ಶಶಿಕಲಾ ದೀಪ ಬೆಳಗಿಸಿ ಶುಭಹಾರೈಸಿದರು. ಸಂಜೀವಿನಿ ಸಂಘದ ಮೇಲ್ವಿಚಾರಕಿ ಗೀತಾ ಪ್ರೇಮಚಂದ್ರ ಮುಖ್ಯಅತಿಥಿಯಾಗಿ ಭಾಗವಹಿಸಿದರು. ವಿದ್ಯಾರ್ಥಿ ಶಿಕ್ಷಕಿ ಶ್ವೇತಾ ಓಣಂ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉಪನ್ಯಾಸಕ ಯೋಗೀಶ್ ತಳೂರು, ಉಪನ್ಯಾಸಕಿಯರುಗಳಾದ ಗೀತಾ ಬಾಲಚಂದ್ರ, ವಿಜಿತಾ, ಮಂಜುಶ್ರೀ, ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿ ವಿದ್ಯಾಶ್ರೀ ಉಪಸ್ಥಿತರಿದ್ದರು. ಸುಮಿತ್ರಾ ಸ್ವಾಗತಿಸಿದರು. ಜನಿತಾ ವಂದಿಸಿದರು. ಮಮತಾ ಕಾರ್ಯಕ್ರಮ ನಿರ್ವಹಿಸಿದರು.