ಕಾಟಿಪಳ್ಳದ ಶ್ರೀ ನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಶಿಕ್ಷಕಿ ಲಲಿತಾ ಪದ್ಮಿನಿ ನಿಧನ

0

ಮೂಲತಃ ಮಂಡೆಕೋಲು ಗ್ರಾಮದವರಾಗಿದ್ದು, ಕಳೆದ ೨೫ ವರ್ಷಗಳಿಗಿಂತಲೂ ಹೆಚ್ಚು ಸಮಯಗಳಿಂದ ಮಂಗಳೂರಿನ ಕಾಟಿಪಳ್ಳದ ಶ್ರೀ ನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದ ಲಲಿತಾ ಪದ್ಮಿನಿಯವರು ಅಸೌಖ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು ೫೬ ವರ್ಷ ವಯಸ್ಸಾಗಿತ್ತು.
ಮಂಡೆಕೋಲು ಗ್ರಾಮದ ಬೊಳುಗಲ್ಲು ದಿ.ಅಚ್ಚುತ ನಾಯಕ್ ರ ಪುತ್ರಿಯಾದ ಇವರು ಪುಣಚದ ಭಾಸ್ಕರ ನಾಯಕ್ ಎಂಬವರೊಂದಿಗೆ ವಿವಾಹವಾಗಿ ಮಂಗಳೂರು ಸೇರಿದ್ದರು. ಕಾಟಿಪಳ್ಳದ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೫ ವರ್ಷಕ್ಕಿಂತಲೂ ಅಧಿಕ ಸಮಯದಿಂದ ಶಿಕ್ಷಕಿಯಾಗಿದ್ದ ಅವರಿಗೆ ಕಳೆದ ಶನಿವಾರ ಅಸೌಖ್ಯ ಕಾಣಿಸಿಕೊಂಡಿತು. ಸೋಮವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರು ಕೊನೆಯುಸಿರೆಳೆದರು. ಪುತ್ರ ಇಂಜಿನಿಯರ್ ಆಗಿರುವ ಶ್ರೀನಿಧಿಯವರನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವನ್ನು ಶಾಲಾ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸೇರಿ ಗೌರವಪೂರ್ವಕರಾಗಿ ನಡೆಸಿಕೊಟ್ಟರೆಂದು ತಿಳಿದು ಬಂದಿದೆ.