ಐವರ್ನಾಡು : ದೇರಾಜೆ ಗೆಳೆಯರ ಬಳಗದ ವತಿಯಿಂದ ವಿಜೃಂಭಿಸಿದ “ಬೆನ್ನಿದ ನೆಲ ಗೊಬ್ಬುದ ಕಲ” ಕೆಸರುಗದ್ದೆ ಕ್ರೀಡಾಕೂಟ

0

ಐವರ್ನಾಡು ಗ್ರಾಮದ ಗೆಳೆಯರ ಬಳಗ ದೇರಾಜೆ ವತಿಯಿಂದ ಬೆನ್ನಿದ ನೆಲ ಗೊಬ್ಬುದ ಕಲ 3 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ಸೆ.15 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಿತು.


ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಪಿ.ಜಿ.ಯವರು ದೀಪ ಬೆಳಗಿಸಿ ಉದ್ಠಾಟಿಸಿ ಶುಭಹಾರೈಸಿದರು.


ಗೆಳೆಯರ ಬಳಗ ದೇರಾಜೆ ಇದರ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್,ಗ್ರಾಮ ಪಂಚಾಯತ್ ಸದಸ್ಯ ದೇವಿಪ್ರಸಾದ್ ಎಸ್.ಎನ್, ಸಂಘದ ಮಾಜಿ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ,ಗದ್ದೆಯ ಮಾಲಕ ದಯಾನಂದ ಶೇಣಿ ಉಪಸ್ಥಿತರಿದ್ದರು.


ಅಜಿತ್ ಐವರ್ನಾಡು ಸ್ವಾಗತಿಸಿ,ಮೋಹನ ಬೋಳುಗುಡ್ಡೆ ವಂದಿಸಿದರು.


ಪುರುಷರಿಗೆ ಹ್ಯಾಂಡ್ ಬಾಲ್,ವಾಲಿಬಾಲ್,ಹಗ್ಗಜಗ್ಗಾಟ,ಬುಗುರಿ ಓಟ ನಡೆಯಿತು.


ಸಾರ್ವಜನಿಕರಿಗೆ ನಿಧಿಶೋಧ,. ಮಹಿಳೆಯರಿಗೆ ಹ್ಯಾಂಡ್ ಬಾಲ್,100 ಮೀ .ಓಟ,ಹಗ್ಗಜಗ್ಗಾಟ,ಬುಗುರಿ ಓಟ ನಡೆಯಿತು.


ಮಕ್ಕಳಿಗೆ 100 ಮೀ ಓಟ ನಡೆಯಿತು.ಕ್ರೀಡಾಕೂಟದ ಯಶಸ್ಸಿಗೆ ಗೆಳೆಯರ ಬಳಗ ದೇರಾಜೆ ಇದರ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗು ಗ್ರಾಮಸ್ಥರು ಸಹರಿಸಿದರು.