88ನೇ ವರ್ಷಕ್ಕೆ ಕಾಲಿರಿಸಿದ ಚಿಲ್ತಡ್ಕ ಜತ್ತಪ್ಪ ಮಾಸ್ತರ್ ರವರಿಗೆ ಸಂಧ್ಯಾರಶ್ಮಿ ವತಿಯಿಂದ ಗೌರವಾರ್ಪಣೆ

0

ಸಂಧ್ಯಾರಶ್ಮಿ ನಿವೃತ್ತ ನೌಕರರ ಸಂಘ ಸುಳ್ಯ ಇದರ ವತಿಯಿಂದ ಸೆ. 16 ರಂದು
88 ನೇ ವರ್ಷಕ್ಕೆ ಕಾಲಿರಿಸಿದ ನಿವೃತ್ತ ಶಿಕ್ಷಕ ಜತ್ತಪ್ಪ ಮಾಸ್ತರ್ ದಂಪತಿ ಚಿಲ್ತಡ್ಕರವರಿಗೆ ಅವರ ಮನೆಯಲ್ಲಿ ಗೌರವಾರ್ಪಣೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ.ಎಸ್. ರಂಗಯ್ಯರವರು ಗೌರವಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಉಪಾಧ್ಯಕ್ಷ ಪಿ.ರಾಮಚಂದ್ರ ಗೌಡ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ತೀರ್ಥರಾಮ ಹೊಸೋಳಿಕೆ,ಶಿಕ್ಷಣ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಎಂ.ಚಿನ್ನಪ್ಪ ಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಗದೀಶ, ನಿವೃತ್ತ ಪಿ.ಡಿ.ಓ. ಪುರುಷೋತ್ತಮ ಗೌಡ ಮಣಿಯಾನಮನೆ, ಶಿವರಾಮ ಗೌಡ ಚಿಲ್ತಡ್ಕ, ನ್ಯಾಯವಾದಿ ವಿಮಲೇಶ್ ಗೌಡ ಮತ್ತಿತರು ಉಪಸ್ಥಿತರಿದ್ದರು.

ವರದಿ : ಡಿ. ಎಚ್