ಸುಳ್ಯದಲ್ಲಿ ಬಿ.ಎಂ.ಎಸ್. ಕಟ್ಟಡ ಕಾರ್ಮಿಕರ ಸಮಾವೇಶ-ಸನ್ಮಾನ

0

ಗಾಂಧಿನಗರದಿಂದ ಜ್ಯೋತಿ ಸರ್ಕಲ್ ವರೆಗೆ ಕಾರ್ಮಿಕರ ಮೆರವಣಿಗೆ

ಭಾರತೀಯ ಮಜ್ದೂರು ಸಂಘ ಸುಳ್ಯ ತಾಲೂಕು ದ.ಕ. ಜಿಲ್ಲೆ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಸುಳ್ಯ ತಾಲೂಕು ಇದರ ವತಿಯಿಂದ ವಿಶ್ವ ಕರ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಾಗೂ ಕಟ್ಟಡ ಕಾರ್ಮಿಕರ ಸಮಾವೇಶ ಹಿರಿಯ ಕಟ್ಟಡ ಕಾರ್ಮಿಕರಿಗೆ ಗೌರವಾರ್ಪಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೆ.17ರಂದು ಸುಳ್ಯದ ಅಮೃತಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸುಳ್ಯ ಗಾಂಧಿನಗರದಿಂದ ಕಾರ್ಮಿಕರ ಜಾಥಾ ನಡೆಯಿತು. ನ್ಯಾಯವಾದಿ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು ಚಾಲನೆ ನೀಡಿದರು.

ಸಭಾ ಕಾರ್ಯಕ್ರಮ : ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ನಾರಾಯಣ ಜಿ.ಎನ್‌. ಅಧ್ಯಕ್ಷತೆ ವಹಿಸಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ ಹಿರಿಯ ಕಾರ್ಮಿಕರನ್ನು ಹಾಗೂ ಶೈಕ್ಷಣಿಕ ಸಾಧಕರನ್ನು ಗೌರವಿಸಿದರು.

ಸುಳ್ಯ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಸುಳ್ಯ ಇದರ ಗೌರವಾಧ್ಯಕ್ಷ ವೆಂಕಟ್ ವಳಲಂಬೆ, ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್,

ಜಿಲ್ಲಾ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಯು., ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ, ಇಂಜಿನಿಯರ್ ಗಳಾದ ಶ್ಯಾಮ್ ಪ್ರಸಾದ್, ದೇವಿಪ್ರಸಾದ್, ಸುಳ್ಯ.ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ., ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸುಳ್ಯದ ಯೋಜನಾಧಿಕಾರಿ ಮಾಧವ ಗೌಡ, ರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಇಂಜಿನಿಯರ್ ಆರೀಫ್ ಬೆಳ್ಳಾರೆ ವೇದಿಕೆಯಲ್ಲಿ ಇದ್ದರು.

ಸಂಘಟನಾ ಕಾರ್ಯದರ್ಶಿ ಮಧುಸೂದನ್, ಪ್ರ.ಕಾರ್ಯದರ್ಶಿ ಮನೋಹರ, ಜತೆ ಕಾರ್ಯದರ್ಶಿ ಶಿವಾನಂದ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ‌ಮೊದಲಾದವರಿದ್ದರು.