ಪ್ರಧಾನಮಂತ್ರಿ ನರೇಂದ್ರಮೋದಿ ಹುಟ್ಟುಹಬ್ಬದ ಹಿನ್ನೆಲೆ

0

ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ವರ್ಷದ ಜನ್ಮದಿನದ ಪ್ರಯುಕ್ತ ಸುಳ್ಯದ ಚೆನ್ನ ಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೆ. 17 ರಂದು ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ನಗರ ಪಂಚಾಯತ್ ಉಪಾಧ್ಯಕ್ಷ ಜಿ. ಬುದ್ಧ ನಾಯ್ಕ, ನಗರ ಪಂಚಾಯತ್ ಸದಸ್ಯರಾದ ಶೀಲಾವತಿ ಕುರುಂಜಿ, ಕಿಶೋರಿ ಶೇಟ್, ನಗರ ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾರಾಯಣ್ ಶಾಂತಿನಗರ, ಒಬಿಸಿ ಮೋರ್ಚಾದ ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ, ಅಶೋಕ ಅಡ್ಕಾರ್, ಬೂಡು ರಾಧಾಕೃಷ್ಣ ರೈ, ನಿಖೇಶ್ ಉಬರಡ್ಕ, ವರ್ಷಿತ್ ಚೊಕ್ಕಾಡಿ, ಸುನಿಲ್ ಕೇರ್ಪಳ, ಚಂದ್ರಶೇಖರ ನೆಡಿಲು,ಚಂದ್ರಶೇಖರ ಕೇರ್ಪಳ, ಚಂದ್ರಶೇಖರ ರಾವ್ ಜಾದವ್, ಚಂದ್ರಶೇಖರ ತೊಡಿಕಾನ, ರಮೇಶ್ ಇರoತಮಜಲು, ನಿರ್ಮಲ ಕೆ. ಎಸ್ ಪಂಜ, ಅನಿತಾ ಪ್ರಕಾಶ್ ಗೋಳಿತೊಟ್ಟು, ಚಂದ್ರಾವತಿ ಸುಣ್ಣಾಜೆ, ಪೂರ್ಣಿಮ ಸೂಂತೋಡು, ಸರಿತಾ ನಿತ್ಯಾನಂದ ಸಿರಿಬಾಗಿಲು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.