ಮೆಟ್ಟಿನಡ್ಕ; ಅನುದಾನಕ್ಕಾಗಿ ಶಾಸಕಿಗೆ ಮನವಿ

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಬೂತ್ ಸಂಖ್ಯೆ 120ರ ಹಲವು ಶಿಥಿಲಗೊಂಡಿರುವ ರಸ್ತೆಗಳ ಮರುಡಾಮರೀಕರಣ ಮತ್ತು ಕಾಂಕ್ರೇಟಿಕರಣ ಹಾಗೂ ಶಿಥಿಲಗೊಂಡಿರುವ ಸೇತುವೆಗಳ ಮರು ರಚನೆ ಹಾಗೂ ವಿವಿಧ ಸಮಸ್ಯೆಗಳಿಗೆ ಅನುದಾನಗಳನ್ನು ಒದಗಿಸಲು ಬಿಜೆಪಿ ಬೂತ್ ಸಮಿತಿ ಮತ್ತು ಕಾರ್ಯಕರ್ತರು ಹಾಗೂ ಸಮಸ್ತ ಊರಿನವರ ಪರವಾಗಿ ಮಾನ್ಯ ಶಾಸಕಿ ಭಾಗೀರಥಿ ಅವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭ ಬೂತ್ ಸಮಿತಿ ಅಧ್ಯಕ್ಷರಾದ ಲೋಹಿತ್ ಚೆಮ್ನೂರು, ಕಾರ್ಯದರ್ಶಿಯಾದ ಪ್ರಜ್ವಲ್ ಕುಂಭಡ್ಕ, ನಾಲ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಶೇಖರ ಬಾಳುಗೋಡು, ಮಹಾಶಕ್ತಿಕೇಂದ್ರದ ಕಾರ್ಯದರ್ಶಿಯವರಾದ ವಿಜಯಕುಮಾರ ಚಾರ್ಮಾತ ಮತ್ತು ತಾಲೂಕು ಹಿಂದುಳಿದ ವರ್ಗ ಯುವ ಮೋರ್ಚಾದ ಉಪಾಧ್ಯಕ್ಷರಾದ ರಾಕೇಶ್ ಮೆಟ್ಟಿನಡ್ಕ ಮತ್ತಿತರರು ಉಪಸ್ಥಿತರಿದ್ದರು.