ಪುಟ್ಟಣ್ಣ ಗೌಡ ಅಳ್ಪೆತೋಟ ಅಲೆಕ್ಕಾಡಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0


ಅಲೆಕ್ಕಾಡಿ ನಿವಾಸಿ ಪುಟ್ಟಣ್ಣ ಗೌಡ ಅಳ್ಪೆತೋಟ ರವರು ಸೆ.1ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಪಡ್ಪಿನಂಗಡಿ ಶಿವ ಗೌರಿ ಕಲಾ ಮಂದಿರದಲ್ಲಿ ನಡೆಯಿತು.


ಬಾಲಕೃಷ್ಣ ಗೌಡ ಕಡೀರ ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪುತ್ರರಾದ ಚಂದ್ರಶೇಖರ ಅಲೆಕ್ಕಾಡಿ,ಆನಂದ ಅಲೆಕ್ಕಾಡಿ, ಅರುಣ್ ಕುಮಾರ್ ಅಲೆಕ್ಕಾಡಿ ಸೊಸೆಯಂದಿರದ ಹರ್ಷಲತಾ, ಹರ್ಷಿತ, ಶಕುಂತಲಾ,
ಪುತ್ರಿಯರಾದ ದಮಯಂತಿ, ದೇವಕಿ, ಶೀಲಾವತಿ, ಅಳಿಯಂದಿರಾದ ಶೀನಪ್ಪ ಗೌಡ, ರುಕ್ಮಯ ಗೌಡ, ಕೇಶವ ಗೋಳ್ತಿಲ ಹಾಗೂ ಕುಟುಂಬಸ್ಥರು, ಹಿತೈಷಿಗಳು,ಬಂಧುಮಿತ್ರರು ಉಪಸ್ಥಿತರಿದ್ದರು