ಹನಿ ಮತ್ತು ತುಂತುರು ನೀರಾವರಿ ಕುರಿತು ಮಾಹಿತಿ ಕಾರ್ಯಕ್ರಮ

0

ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಸುಳ್ಯ ರೈತ ಉತ್ಪಾದಕ ಕಂಪನಿ ಇದರ ಸಹಯೋಗದೊಂದಿಗೆ ಹನಿ ಮತ್ತು ತುಂತುರು ನೀರಾವರಿ ಕುರಿತು ಮಾಹಿತಿ ಕಾರ್ಯಕ್ರಮ ಎ ಪಿ ಎಂ ಸಿ ಸಭಾಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಜೈನ್ ಇಟ್ರಿಗೇಷನ್ ಸಿಸ್ಟಮ್ ಲೀ ಇದರ ಪ್ರಾದೇಶಿಕ ವ್ಯವಸ್ಥಾಪಕರು ಶ್ರೀ ಹಿಮಾಂಶು ಚತುರ್ವೇದಿ ಮತ್ತು ಜೈನ್ ಇಟ್ರಿಗೇಷನ್ ಸಿಸ್ಟಮ್ ಲೀ ಇದರ ಬೇಸಾಯ ತಜ್ಞರಾದ ನಿರಂಜನ ನಂದಿಪುರ ಇವರುಗಳು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶ್ರೀಮತಿ ಸುಹನಾ ಪಿ ಕೆ, ಸುಳ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷರು ಶ್ರೀ ವೀರಪ್ಪ ಗೌಡ ಕೆ, ಸಹಾಯಕ ತೋಟಗಾರಿಕೆ ಅಧಿಕಾರಿ ಅರಬಣ್ಣ ಪೂಜೇರಿ, ಸುಳ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ಸುಮಾರು 40ಜನ ರೈತರು ಭಾಗವಹಿಸಿದ್ದರು.