ಅರಂತೋಡು: ಶ್ರೀ ವಿಷ್ಣು ಎಲೆಕ್ಟ್ರಾನಿಕ್ಸ್ ಸೇಲ್ಸ್ & ಸರ್ವಿಸ್ ಶುಭಾರಂಭ

0

ಅರಂತೋಡು ಗ್ರಾಮದ ಗಿರಿಜಾ ಸಂಕೀರ್ಣದಲ್ಲಿ ತೊಡಿಕಾನ ಶೆಟ್ಯಡ್ಕ ಭಾನುಪ್ರಕಾಶ್ ಮಾಲಕತ್ವದ ಶ್ರೀವಿಷ್ಣು ಎಲೆಕ್ಟ್ರಾನಿಕ್ಸ್ ಸೇಲ್ಸ್ ಸರ್ವಿಸ್ ಸೆ.19 ರಂದು ಶುಭಾರಂಭಗೊಂಡಿತು.

ಸುಳ್ಯ ಕೆ ವಿ ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಪ್ರಾಶುಂಪಾಲರಾದ ಡಾ. ಲೀಲಾಧರ್ ಡಿ .ವಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕಟ್ಟಡ ಮಾಲೀಕರಾದ ಜತ್ತಪ್ಪ ಎ ಕೆ, ವೀರಪ್ಪ ಗೌಡ ದೋಳ, ದಯಾನಂದ ಕುರುಂಜಿ, ಹಾಗೂ ಮಣಿಕಂಠ ಕಲ್ಲುಗದ್ದೆ
ಕುಟುಂಬಸ್ಥರು ಮತ್ತು ಬಂದು ಮಿತ್ರರು , ಗ್ರಾಹಕರು
ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗ್ರಾಂ .ಪಂ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ
ಸರ್ವರನ್ನು ಸ್ವಾಗತಿಸಿ ವಂದಿಸಿದರು.