ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ ಸಹಾಯ ಸಂಘಗಳ ಕಳಂಜ ಘಟ ಸಮಿತಿ ಸಭೆ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ ಸಹಾಯ ಸಂಘಗಳ ಕಳಂಜ ಘಟ ಸಮಿತಿ ಸಭೆ ಸೆ. 22ರಂದು ಕಳಂಜ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಕಳಂಜ ಘಟ ಸಮಿತಿಯ ಅಧ್ಯಕ್ಷ ಗಂಗಾಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸುಳ್ಯ ವಲಯದ ಮೇಲ್ವಿಚಾರಕಿ ಶ್ರೀಮತಿ ಗೀತಾ, ಸೋಣoಗೇರಿ ವಲಯದ ಸಂಯೋಜಕಿ ಶ್ರೀಮತಿ ಸರಿತಾ, ಕಳಂಜ ಸೇವಾದೀಕ್ಷಿತೆ ಶ್ರೀಮತಿ ಯಶೋಧ ಎಂ, ಘಟ ಸಮಿತಿ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಘಟ ಸಮಿತಿಗೆ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ದೀಕ್ಷಿತ್ ಶೇಣಿ, ಕಾರ್ಯದರ್ಶಿಯಾಗಿ ಶ್ರೀಮತಿ ವಿಶಾಲಾಕ್ಷಿ ಮಣಿಮಜಲು, ಉಪಾಧ್ಯಕ್ಷರಾಗಿ ಹರಿಣಾಕ್ಷಿ ಬಾಳಿಲ, ಜೊತೆ ಕಾರ್ಯದರ್ಶಿಯಾಗಿ ಗುರುವ ಮುಂಡುಗಾರು, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೇಮಲತಾ ಮಣಿಮಜಲು ಇವರನ್ನು ಆಯ್ಕೆಮಾಡಲಾಯಿತು. ಜವಾಬ್ದಾರಿ ತಂಡದ ಶ್ರೀಮತಿ ತ್ರಿವೇಣಿ ಸ್ವಾಗತಿಸಿ, ಶ್ರೀಮತಿ ಪವಿತ್ರಾ ವಂದಿಸಿದರು.