ಅಲೆಕ್ಕಾಡಿಯಲ್ಲಿ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ

0

ಮುರಳ್ಯ ಅಲೆಕ್ಕಾಡಿ ಸರಕಾರಿ ಶಾಲೆಯಲ್ಲಿ ಅ. 2ರಂದು ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ಸರ್ವಧರ್ಮ ಪ್ರಾರ್ಥನೆ ಬಳಿಕ ಶಾಲಾ ಮೈದಾನ, ಒಳಾಂಗಣ, ಹೊರಾಂಗಣ, ತರಗತಿ ಕೊಠಡಿ, ಪರಿಸರದ ಬೀದಿಬದಿ, ಶಾಲಾ ಕೈತೋಟ ಕಸ ಹೆಕ್ಕಿ ಸ್ವಚ್ಛತೆಯ ಮೂಲಕ ಶುಚಿತ್ವ ಮಾಡಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅವಿನಾಶ್ ದೇವರಮಜಲು, ಉಪಾಧ್ಯಕ್ಷೆ ಸವಿತಾ ಕರಿಂಬಿಲ, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಾಲಕೃಷ್ಣ ಪೂಜಾರಿ, ಗೈಡ್ಸ್ ಶಿಕ್ಷಕಿಯರಾದ ನಳಿನಾಕ್ಷಿ ರೈ.ಬಿ., ಮಿಥುನಾಕ್ಷಿ ಎಂ., ಬನ್ನಿ ಶಿಕ್ಷಕಿ ವಾಣಿಶ್ರೀ, ಸಮಿತಿ ಸದಸ್ಯರು ಶಿಕ್ಷಕ ವೃಂದಾ, ಪೋಷಕರು ಉಪಸ್ಥಿತರಿದ್ದರು.