ಜೆಡಿಎಸ್ ಕಚೇರಿಯಲ್ಲಿ ಗಾಂಧೀಜಿ – ಶಾಸ್ತ್ರೀಜಿ‌ ಜಯಂತಿ

0

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ಜನತಾದಳ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿರುವ ಸುಕುಮಾರ್ ಕೊಡ್ತುಗುಳಿಯವರು ದೀಪ ಬೆಳಗಿಸಿ ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ ಆತ್ಮಕಥನದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಉಪಾಧ್ಯಕ್ಷರಾಗಿರುವ ರೋಹನ್ ಪೀಟರ್, ಪ. ಜಾತಿ ಪ ಪಂ. ಮೋರ್ಚಾ ಅಧ್ಯಕ್ಷ ಎಂ.ಬಿ. ಚೋಮ, ರಾಮಚಂದ್ರ ಬಲ್ಲಡ್ಕ ನಿಹಾಲ್ ಕೊಡ್ತುಗುಳಿ ಇವರುಗಳು ಭಾಗವಹಿಸಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನರವರು ಸ್ವಾಗತಿಸಿ, ವಂದಿಸಿದರು.