ಅ.11: ಕಮಿಲಡ್ಕ ದುರ್ಗಾದೇವಿ ಮಂದಿರ, ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವ

0

ಉಬರಡ್ಕಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕಶ್ರೀದುರ್ಗಾದೇವಿ ಮಂದಿರ, ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಪ್ರಂಪ್ರತಿ ಜರಗುವ ಮಹಾನವರಾತ್ರಿ ಉತ್ಸವವು ಅ. 11 ರಂದು ಶ್ರೀ ದೇವಿಯ ಪಾತ್ರಿ ರವಿ ಪ್ರಸಾದ್ ಕಮಿಲಡ್ಕ ಮತ್ತು ವಿಷ್ಣು ಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ನಡೆಯಲಿರುವುದು.

ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ
ಅ. 10 ರಂದು ಬೆಳಗ್ಗೆ ಗಂಟೆ 7:30ಕ್ಕೆ ಹೊಸ ಅಕ್ಕಿ ನವನ್ನ (ಕದಿರು ಕಟ್ಟುವ ವಿಶೇಷ ಕಾರ್ಯಕ್ರಮವು ನಡೆಯಲಿದೆ.
ಅ.11ರಂದು ಬೆಳಗ್ಗೆ 7:00 ಗಂಟೆಗೆ ಸ್ಥಳೀಯ ಭಜಕ ವೃಂದದವರಿಂದ ಭಜನಾ ಕಾರ್ಯಕ್ರಮ, ನಂತರ
ಶ್ರೀ ದುರ್ಗಾದೇವಿ ಮತ್ತು ಶ್ರೀಮಹಾವಿಷ್ಣುಮೂರ್ತಿ ದೈವದ ದರ್ಶನ ಸೇವೆಯಾಗಿ ಬಳಿಕ ಮಾರಿಕಳ ಪ್ರವೇಶ, ಹರಕೆಯ ತುಲಾ ಭಾರ ಸೇವೆ, ಪ್ರೇತ ಉಚ್ಚಾಟನೆ ಮತ್ತು ಭಕ್ತರಿಂದ ಹರಕೆ ಒಪ್ಪಿಸುವ ಕಾರ್ಯಕ್ರಮವು ನಡೆಯಲಿದೆ. ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು. ಅಪರಾಹ್ನ ಮಂಗಳ ಸ್ನಾನವಾಗಿ ವಿಶೇಷವಾಗಿ ಸಾಮೂಹಿಕ ಆಯುಧ ಪೂಜೆಯು ನಡೆಯಲಿದೆ ಎಂದು ಶ್ರೀದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರು ತಿಳಿಸಿರುತ್ತಾರೆ.