ಬೆಳ್ಳಾರೆಯಲ್ಲಿ ಭೀಕರ ಮಳೆ – ನೇಲ್ಯಮಜಲು – ಕುರುಂಬುಡೇಲು ಸೇತುವೆಗೆ ಹಾನಿ

0

ಬೆಳ್ಳಾರೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ನೇಲ್ಯಮಜಲು,ಕುರುಂಬುಡೇಲು ಪುಡ್ಕಜೆ ಸಂಪರ್ಕಿಸುವ ಸೇತುವೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.
1955 ರಲ್ಲಿ ಕಟ್ಟಿದ ನೇಲ್ಯಮಜಲು ಕುರುಂಬುಡೇಲು ಪುಡ್ಕಜೆ ಸಂಪರ್ಕಿಸುವ ಸೇತುವೆ ಇಂದಿನ ಮಳೆಗೆ ಪೂರ್ಣ ಹಾನಿಗೊಂಡು ಒಂದು ಕಡೆ ವಾಲಿಕೊಂಡಿದೆ.ಈ ಬಗ್ಗೆ ಇಲ್ಲಿನ ಸ್ಥಳೀಯ, ಜಿ.ಪಂಚಾಯತ್ ಹಾಗೂ ಸುಳ್ಯದ ಶಾಸಕರಿಗೂ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಇಲ್ಲಿನ ರಾಜಕೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹೊಸತೊಂದು ಸೇತುವೆ ಇನ್ನೂ ಮರೀಚಿಕೆಯಾಗಿದೆ.

ಈ ಸೇತುವೆಯ ಮತ್ತೊಂದು ಪಕ್ಕದಲ್ಲಿ ಬಡ ಕುಟುಂಬಗಳು ಹಾಗೂ ದಲಿತ ಕುಟುಂಬಗಳು ವಾಸವಾಗಿರುವುದರಿಂದ ಇವರ ಬಗ್ಗೆ ಯಾರಿಗೂ ಸಹಾನುಭೂತಿ ವ್ಯಕ್ತವಾಗದೇ ಇರುವುದು ಖೇದಕರ ಸಂಗತಿಯಾಗಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಯಂ ಪ್ರೇರಿತವಾಗಿ ಈ ಬಡಕುಟುಂಬಗಳ ಬೇಡಿಕೆಯಾದ ಒಂದು ಸೇತುವೆಯನ್ನು ನಿರ್ಮಾಣ ಮಾಡಿಕೊಡುವವಂತೆ ಇಲ್ಲಿನ ನಾಗರಿಕರು ವಿನಂತಿಸಿದ್ದಾರೆ.