ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ದುರ್ಗಾ ಪೂಜೆ – ಭಜನಾ ಸತ್ಸಂಗ ಕಾರ್ಯಕ್ರಮ

0

ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಅಂಗವಾಗಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ 211ನೇ ಕ್ರತಿಮಾಲೆ ಸತ್ಯಂ ಶಿವಂ ಸುಂದರಂ ನ್ನು ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಕೋಡಿವಾಳ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಕೃಷಿಕ ಜಗನ್ನಾಥ ಮುಡೂರು ಉಪಸ್ಥಿತರಿದ್ದರು.
ಸಾಯಿ ಪ್ರಶಾಂತ್ ಸ್ವಾಗತಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ಕಾರ್ಯಕ್ರಮ ನಿರೂಪಿಸಿದರು.

ಆಶ್ರಮದಲ್ಲಿ ಗಣಹೋಮ,ದುರ್ಗಾ ಪೂಜೆ,ಸಾಯಿ ಪ್ರಶಾಂತ್ ಬಳಗದವರಿಂದ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.ಬಳಿಕ ಪ್ರಸಾದ ವಿತರಣೆ ಸಹಭೊಜನ ನಡೆಯಿತು.