ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ರಚನೆ

0


ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಗುಂಡಿ, ಕೋಶಾಧಿಕಾರಿಯಾಗಿ ಹಮೀದ್ ಹಾಜಿ ಆಯ್ಕೆ


ಸುಳ್ಯ ತಾಲೂಕಿನ ಸಮಸ್ತದ ಅಧಿನದಲ್ಲಿರುವ 15 ಜಮಾಅತ್ ಗಳ ಪ್ರತಿನಿಧಿಗಳ ಸಭೆಯು ಸೈಯದ್ ಝೈನುಲ್ ಆಬಿದೀನ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಅ.9 ರಂದು ಸುಳ್ಯದ ಸುಪ್ರಿಮ್ ಹಾಲ್ ನಲ್ಲಿ ನಡೆಯಿತು. ಸಭೆಯನ್ನು ಬಹು| ಝೈನುಲ್ ಆಬಿದೀನ್ ತಂಙಳ್ ದುವಾ ಮೂಲಕ ಉದ್ಘಾಟಿಸಿದರು. ಹಿರಿಯರಾದ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಗುಂಡಿ ಅರಂತೋಡು, ಕೋಶಾಧಿಕಾರಿಯಾಗಿ ಹಮೀದ್ ಹಾಜಿ ಸುಳ್ಯ, ಉಪಾಧ್ಯಕ್ಷರುಗಳಾಗಿ ಹಾಜಿ ಇಬ್ರಾಹಿಂ ಕತ್ತರ್, ಹಾಜಿ ಹೆಚ್.ಎ ಅಬ್ಬಾಸ್ ಸೆಂಟ್ಯಾರ್ ಕಲ್ಲುಗುಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಜಮಾಲ್ ಬೆಳ್ಳಾರೆ, ಜತೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಪೋಪಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಮೊಹಮ್ಮದ್ ಪವಾಝ್, ಗೌರವ ಸಲಹೆಗಾರರಾಗಿ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಇಸಾಕ್ ಸಾಹೇಬ್ ಪಾಜಪಳ್ಳ, ಟಿ.ಎಂ ಶಹೀದ್ ತೆಕ್ಕಿಲ್, ಹಾಜಿ ಅಬೂಬಕ್ಕರ್ ಮಂಗಳ, ಹಾಜಿ ಅಹ್ಮದ್ ಸುಪ್ರಿಮ್, ಆಲಿ ಹಾಜಿ ಕಲ್ಲುಗುಂಡಿ, ತಾಜ್ ಮೊಹಮ್ಮದ್ ಸಂಪಾಜೆ ಹಾಗೂ ನಿರ್ದೇಶಕರುಗಳಾಗಿ ಜಿ.ಕೆ ಹಮೀದ್ ಗೂನಡ್ಕ, ಶರೀಫ್ ಭಾರತ್ ಪಾಜಪಳ್ಳ, ಮಹಮ್ಮದ್ ಹಮೀದಿಯಾ ಸಂಪಾಜೆ, ಹನೀಫ್ ಹಾಜಿ ಕುಂಭರ್ಚೋಡು, ಪಿ.ಎಸ್. ಇಸ್ಮಾಯಿಲ್ ಕಳಂಜ, ವಿ.ಕೆ ಶರೀಪ್ ಐವರ್ನಾಡು, ಹಂಸ ದೊಡ್ಡತೋಟ, ಮಹಮ್ಮದ್ ಸಿ.ಹೆಚ್ ಪೈಂಬಚ್ಚಾಲ್, ನಝೀರ್ ಶಾಲೆಕ್ಕಾರ್ ಮಂಡೆಕೋಲು, ಅಬ್ದುಲ್ಲ ಮಾರ್ಗ ಮಂಡೆಕೋಲು, ನಝೀರ್ ಬೆಳ್ಳಾರೆ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಶರೀಫ್ ರಿಲ್ಯಾಕ್ಸ್, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಪಿ.ಕೆ. ಉಮ್ಮರ್ ಗೂನಡ್ಕ, ಟಿ.ಬಿ ಹನೀಫ್ ದರ್ಖಾಸ್, ಅಬ್ದುಲ್ಲ ಕೋಟುಗೆರೆ, ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಅರಂಬೂರು, ಉಮ್ಮರ್ ಅರಂಬೂರು, ಇಸ್ಮಾಯಿಲ್ ನೀರ್ಪಂಜ, ಅಬ್ದುಲ್ ಖಾದರ್ ಬಾಂಬೈ ಸಂಪಾಜೆ, ಇಸ್ಮಾಯಿಲ್ ಸಂಪಾಜೆ, ಅಬ್ದುಲ್ ಕರೀಮ್ ಕುಂಭರ್ಚೋಡು, ಅಬ್ದುಲ್ ಖಾದರ್ ಕುಂಭರ್ಚೋಡು, ಎ.ಬಿ. ಮೊಯಿದೀನ್ ಕಳಂಜ, ಇಸ್ಮಾಯಿಲ್ ಕಳಂಜ, ಇಬ್ರಾಹಿಂ ನಿಡುಬೆ, ಶರೀಫ್ ನಿಡುಬೆ, ಮೀದ್ ಲಾಜ್ ದಾರಿಮಿ ದುಗ್ಗಲಡ್ಕ, ಝಖರಿಯ ಫೈಝಿ ದುಗ್ಗಲಡ್ಕ, ಅಬ್ದುಲ್ಲ ಫೈಝಿ ಪೈಬಂಚ್ಚಾಲ್, ಅಬ್ದುಲ್ ರಹಿಮಾನ್ ಪೈಬಂಚ್ಚಾಲ್ ಇವರುಗಳು ಆಯ್ಕೆಯಾದರು.