ಡಾ.ಬಿಳಿಮಲೆಯವರ ಪುಸ್ತಕ ಹುಡುಕಾಟ ಬಿಡುಗಡೆ – ಮುಂಡೋಡಿ, ಸಂಶುದ್ದೀನ್ ಶುಭಹಾರೈಕೆ

0

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಖ್ಯಾತ ಚಿಂತಕರೂ, ಬರಹಗಾರರೂ ಆದ ಡಾ.ಪುರುಷೋತ್ತಮ ಬಿಳಿಮಲೆಯವರು ಬರೆದಿರುವ ಹುಡುಕಾಟ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಬ್ಯಾರಿ ಅಕಾಡೆಮಿ ಸದಸ್ಯರಾದ ಶರೀಫ್ ಬಾಳಿಲ ಮೊದಲಾದವರು ಭಾಗವಹಿಸಿ ಬಿಳಿಮಲೆಯವರಿಗೆ ಶುಭಹಾರೈಸಿದರು.