ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆಯುಧ ಪೂಜೆ

0

ಅ.12 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ನಡೆಯಿತು.

ಸಂಸ್ಥೆಯ ಸೂರ್ಯ ದೇವಾಲಯದಲ್ಲಿ ಪೂಜೆ ನಡೆದ ಬಳಿಕ ಶಾಲಾ ವಾಹನಗಳು, ಗಣಕಯಂತ್ರಗಳು, ಮರದ ಕೆಲಸದ ಯಂತ್ರಗಳು, ವಿಜ್ಞಾನ ಪ್ರಯೋಗಾಲಯ, ಟಿಂಕರಿಂಗ್ ಲ್ಯಾಬ್ ಮೊದಲಾದ ಪರಿಕರಗಳಿಗೆ ಪೂಜೆ ಮಾಡಲಾಯಿತು. ಬಳಿಕ ವಿಜ್ಞಾನ ಆವಿಷ್ಕಾರಗಳ ಜೊತೆಗೆ ಆಧ್ಯಾತ್ಮಿಕತೆ ಸೇರಿಕೊಂಡು ನಾಗರೀಕತೆ ಬೆಳೆದು ಬಂದಿದೆ . ಹಿರಿಯರ ನಂಬಿಕೆ, ಸಂಪ್ರದಾಯಗಳನ್ನು ಉಳಿಸುವ ಕೆಲಸ ಯುವ ಜನತೆಯಿಂದಾಗಬೇಕಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಮನಶಾಸ್ತ್ರಜ್ಞ ಅಕ್ಷರ ದಾಮ್ಲೆ, ವಾಹನ ಚಾಲಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.