ಎಲಿಮಲೆ : ಅಕ್ಷಯ ಸ್ಟೀಲ್ ಹಾಡ್೯ ವೇರ್ ಮತ್ತು ವೆಲ್ಡಿಂಗ್ ಇಲ್ಲಿ ಆಯುಧ ಪೂಜೆ, ದಿವ್ಯಾಂಗರಿಗೆ ಮಂಚ ಕೊಡುಗೆ

0

ಎಲಿಮಲೆಯ ಅಕ್ಷಯ ಸ್ಟೀಲ್ಸ್ ಹಾರ್ಡ್ ವೇರ್ ಮತ್ತು ವೆಲ್ಡಿಂಗ್ ಇಲ್ಲಿ ಆಯುಧ ಪೂಜೆ ಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಮಂಚ ಕೊಡುಗೆ ಕಾರ್ಯಕ್ರಮ ನಡೆಯಿತು.

ಅಮರಪಡ್ನೂರು ಗ್ರಾಮದ ಚೂಂತಾರು ಲಿಲೇಶ್ ಮತ್ತು ಮೀನಾಕ್ಷಿ ದಂಪತಿಗಳ ಪುತ್ರ ತಾರಾನಾಥ್ ರವರಿಗೆ ಮಂಚ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನಿವೃತ್ತ ಪೋಲೀಸ್ ಕೃಷ್ಣಯ್ಯ ಕಾಣಿಕೆ, ನೆಲ್ಲೂರು ಕೆಮ್ರಾಜೆ ಸೊಸೈಟಿ ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ ಹಾಗೂ ಕೇಶವ ಕೋಡ್ತುಗುಳಿ, ಚಂದ್ರ ದಾಸನಕಜೆ ಮತ್ತಿತರರು ಉಪಸ್ಥಿತರಿದ್ದರು. ಉದಯ ಟೈಲರ್ ಕಾರ್ಯಕ್ರಮ ನಿರೂಪಿಸಿದರು. ಮ್ಹಾಲಕರಾದ ಹೇಮನಾಥ ಕೋಡ್ತುಗುಳಿ ವಂದಿಸಿದರು.