ಮಾವಿನಕಟ್ಟೆ : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಉದಯಗಿರಿಯಲ್ಲಿ ಸಾರ್ವಜನಿಕ ಆಯುಧ ಪೂಜಾ ಕಾರ್ಯಕ್ರಮ

0

ಮಾವಿನಕಟ್ಟೆಯ ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಸಾರ್ವಜನಿಕ ಆಯುಧ ಪೂಜಾ ಕಾರ್ಯಕ್ರಮ ವು ಅ.11ರಂದು ನಡೆಯಿತು.

ಬೆಳಿಗ್ಗೆ ಗಣಪತಿ ಹವನ ಬಳಿಕ ಭಜನಾ ಕಾರ್ಯಕ್ರಮ, ಶ್ರೀ ದೇವಿಯ ಪೂಜೆ, ವಾಹನ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ.ತೀರ್ಥರಾಮ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಧಾಕೃಷ್ಣ ಮಾವಿನಕಟ್ಟೆ ಶ್ರೀ ಕಟೀಲ್, ಕೋಶಾಧಿಕಾರಿ ಗೋಪಿನಾಥ ಮೆತ್ತಡ್ಕ ಸೇರಿದಂತೆ ಸಮಿತಿ ಸದಸ್ಯರು ಊರವರು ಪಾಲ್ಗೊಂಡಿದ್ದರು.