ಬೊಮ್ಮಾರಿನಲ್ಲಿ ನಡೆಯಲಿರುವ ದಿ.ಚನಿಯ ಭಾಗವತರ ಸಂಸ್ಮರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನವೆಂಬರ್ 10ರಂದು ಸಂಸ್ಮರಣಾ ಕಾರ್ಯಕ್ರಮ, ಸನ್ಮಾನ, ತಾಳಮದ್ದಳೆ

ದಿ. ಚನಿಯ ಭಾಗವತ ರ ಸಂಸ್ಮರಣಾ ಸಮಿತಿ ಮತ್ತು ಯಕ್ಷ ಅಭಿಮಾನಿ ಬಳಗ ಮರ್ಕಂಜ, ಮೂವರ್ ದೈವಸ್ಥಾನ ಸೇವಾ ಸಮಿತಿ ಮತ್ತು ಗಜಾನನ ಮಿತ್ರ ಮಂಡಳಿ ಬೊಮ್ಮಾರು ಇದರ ಸಹಕಾರದೊಂದಿಗೆ ಬೊಮ್ಮಾರಿನ ಶ್ರೀ ಮೂವರ್ ದೈವಸ್ಥಾನದ ಸಭಾಂಗಣದಲ್ಲಿ ನ.10ರಂದು ಶ್ರೀ ದಾಸರಬೈಲು ಚನಿಯ ಭಾಗವತರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು(ಅ.‌13) ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ರಾವ್ ರೆಂಜಾಳ, ಯಕ್ಷಗಾನ ಕಲಾವಿದರಾದ ದಾಮೋದರ ಪಾಟಾಳಿ ಮಿತ್ತಡ್ಕ, ಜಯಪ್ರಕಾಶ್ ಗುಂಡಿ, ಶ್ಯಾಂಪ್ರಸಾದ್ ಗುಂಡಿ, ಬಾಲಕೃಷ್ಣ ನಾಯ್ಕ ಬೊಮ್ಮಾರು, ಬೊಮ್ಮಾರು ಮೂವರ್ ದೇವಸ್ಥಾನ ದ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಬೊಮ್ಮಾರು, ನಿತ್ಯ ‌ನೇಮಿಕ ಜಯರಾಮ ದೇಶೆಕೋಡಿ, ಗಜಾನನ ಮಿತ್ರ ಮಂಡಳಿ ಬೊಮ್ಮಾರು ಇದರ ಪ್ರಧಾನ ಕಾರ್ಯದರ್ಶಿ ಚಂದ್ರ ಬೊಮ್ಮಾರು, ದಿ.ಚನಿಯ ನಾಯ್ಕರ ಪುತ್ರ ಜಯಕುಮಾರ್ ದೇಶಕೋಡಿ ಉಪಸ್ಥಿತರಿದ್ದರು.