ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ನಲ್ಲಿ 50 ರ ಸಂಭ್ರಮಾಚರಣೆ

0

ಹೊಸ ಆವಿಷ್ಕಾರದ ಲೂಬ್ ಸ್ಟೇಷನ್ ಹಾಗೂ ಪಯಸ್ವಿನಿ ಟೈರ್ ಕೇರ್ ಉದ್ಘಾಟನೆ

ಸುಳ್ಯದ ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ಇದರ 50 ರ ಸಂಭ್ರಮಾಚರಣೆಯು
ಅ.16 ರಂದು ನಡೆಯಿತು.

ಕಳೆದ 50 ವರ್ಷಗಳ ಹಿಂದೆ ದಿ.ಅಪ್ಪಾಜಿ ರಾವ್ ರವರು ನಡೆಸುತ್ತಿದ್ದ ಸಂಸ್ಥೆಯನ್ನು ಸ್ಥಳೀಯರಾದ ಹಿರಿಯರಾದ ಮುಡುವಕುಂಞ, ಸಿ.ಮಹಮ್ಮದ್, ಚೆಂಗಳ ಮಹಮ್ಮದ್ ಹಾಗೂ ಎಂ.ಎ.ಅಬೂಬಕ್ಕರ್ ರವರು ಖರೀದಿಸಿ ಮುನ್ನಡೆಸಿಕೊಂಡು ಬಂದಿದ್ದರು. ಪ್ರಸ್ತುತ ಕೆ.ಬಿ.ಯೂಸುಫ್ ಮತ್ತು ಸಿ ಮಹಮ್ಮದ್ ರವರ ಮಕ್ಕಳಾದ ಅಬ್ದುಲ್ ಮುಜೀಬ್, ಅಬ್ದುಲ್ ಲತೀಪ್ ರವರ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದು ಇದೀಗ 50 ವರ್ಷ ಪೂರೈಸಿದೆ.


ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷವಾಗಿ ಗ್ರಾಹಕರಿಗೆ ಲಕ್ಕಿ ಕೂಪನ್ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಆಧುನಿಕ ಸ್ಪರ್ಶದೊಂದಿಗೆ ಪಯಸ್ವಿನಿ ಟೈರ್ ಕೇರ್ ಶಾಪ್ ಹಾಗೂ ಲೂಬ್ ಸ್ಟೇಷನ್ ಇದರ ಉದ್ಘಾಟನೆಯನ್ನು
ಹಿಂದೂಸ್ತಾನ್ ಪೆಟ್ರೋಲಿಯಂ ಡಿ.ಜಿ.ಎಂ ನವೀನ್ ಕುಮಾರ್, ಕಂಪೆನಿಯ ಫೈನಾನ್ಸಿಯಲ್ ವಸಂತ ಶೆಟ್ಟಿ ಯವರು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಎಂ.ಬಿ.ಸದಾಶಿವ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಸಂಶುದ್ದೀನ್, ನ.ಪಂ.ಸದಸ್ಯ ಉಮ್ಮರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಹಮೀದ್ ಜನತಾ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್,ಮಹಮ್ಮದ್ ‌ಕೆ.ಎಂ.ಎಸ್,ಕೆ.ಬಿ. ಮಹಮ್ಮದ್, ಶ್ರೀನಿಧಿ, ಫೈಜಲ್ ಕಟ್ಟೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೇಲ್ಸ್ ಟಾಪ್ ಅವಾರ್ಡ್ ಪ್ರಶಸ್ತಿ ಪತ್ರವನ್ನು ಜನರಲ್ ಮ್ಯಾನೇಜರ್ ಪಾಲುದಾರರಿಗೆ ಹಸ್ತಾಂತರಿಸಿದರು. ಸಂಸ್ಥೆಯಲ್ಲಿ
2 ವರ್ಷಕ್ಕಿಂತ ಮೇಲ್ಪಟ್ಟು‌ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಉಡುಗೊರೆ ನೀಡಿಅಭಿನಂದಿಸಲಾಯಿತು. ಲಕ್ಕಿ ಕೂಪನ್ ಕರ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಪಾಲುದಾರರಾದ ಅಬ್ದುಲ್ ಮುಜೀಬ್, ಅಬ್ದುಲ್ ಲತೀಫ್, ಮುಸ್ತಾಫ, ಇಬ್ರಾಹಿಂ ರವರು ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೌಕರರು ಸಹಕರಿಸಿದರು.
50 ವರ್ಷ ತುಂಬಿದ ಪ್ರಯುಕ್ತ ಪವರ್ ಪೆಟ್ರೋಲ್ ಲೀಟರ್ ಒಂದಕ್ಕೆ ರೂ. 4 ಕಡಿತ ಹಾಗೂಎಲ್ಲಾ ತರದ ಆಯಿಲ್ ಖರೀದಿಯ ಮೇಲೆ 40% ವಿಶೇಷ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದರು.