ಎನ್ ಎಂ ಸಿ ವಿದ್ಯಾರ್ಥಿಗಳಿಂದ ಕಡಮಾಜೆ ಫಾರ್ಮ್ ಗೆ ಕ್ಷೇತ್ರ ಅಧ್ಯಯನ ಭೇಟಿ

0

ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದಿಂದ ಒಂದು ದಿನದ ಕ್ಷೇತ್ರ ಅಧ್ಯಯನ ಭೇಟಿಯನ್ನು ಕಡಮಾಜೆ ಫಾರ್ಮ್ ಗೆ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಕೃಷಿ ಚಟುವಟಿಕೆಯಲ್ಲಿ ಬೇರೆ ಬೇರೆ ಪ್ರಾಣಿ ಸಾಕಾಣಿಕೆಗಳ ಪ್ರಯೋಜನಗಳು , ಸಂಪನ್ಮೂಲಗಳ ಮರು ಬಳಕೆಯ ಪ್ರಾತ್ಯೇಕ್ಷಿಕೆ ಹಾಗೂ ಸರಕಾರದಿಂದ ದೊರಕುವ ಸೌಲಭ್ಯಗಳು , ಹಾಗೂ ಸವಾಲುಗಳ ಬಗ್ಗೆ ಮಾಹಿತಿಯನ್ನು ಕಡಮಾಜೆ ಫಾರ್ಮ್ ನ ಮುಖ್ಯಸ್ಥರಾದ ದೇವಿಪ್ರಸಾದ್ ಕೆ . ಇವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು .

ಕ್ಷೇತ್ರ ಅಧ್ಯಯನ ಭೇಟಿಯಲ್ಲಿ 21 ವಿದ್ಯಾರ್ಥಿಗಳು ಹಾಗೂ ವಿಭಾಗದ ಮುಖ್ಯಸ್ಥರು ಕೃಪಾ.ಎ.ಎನ್ ಹಾಗೂ ಶೋಭಾ. ಎ ಉಪನ್ಯಾಸಕ ವೃಂದವು ಇದರ ಸದುಪಯೋಗವನ್ನು ಪಡೆದುಕೊಂಡರು.