ಅನಿಸಿಕಾ ಆಚಾರ್ಯಳಿಗೆ “ಅತ್ಯುತ್ತಮ ಕಲಾಕೃತಿ ಪ್ರಶಸ್ತಿ

0

ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ‘ಎ’ವಲಯ XV, ಪಂಜ, ಸುಳ್ಯ ತಾಲೂಕು, ದ. ಕ. ಈ ಸಂಸ್ಥೆ ಜೇಸಿ ಸಪ್ತಾಹ 2024ರ ಅಂಗವಾಗಿ ದಿನಾಂಕ 17-10-2024ರಂದು ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನಿಸಿಕಾ ಆಚಾರ್ಯ “ಅತ್ಯುತ್ತಮ ಕಲಾಕೃತಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾಳೆ.

ಅಲ್ಲದೇ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ(ರಿ.), ದಸರಾ ಉತ್ಸವ ಸಮಿತಿ, ಸುಳ್ಯ ತಾಲೂಕು, ಶ್ರೀ ಶಾರದಾಂಬಾ ಉತ್ಸವ ಸಮಿತಿ, ಸುಳ್ಯ ದ. ಕ. ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ದಸರಾ 2024 ನಡೆಯಿತು. 13-10-2024ನೇ ಭಾನುವಾರ ನಡೆದ ಮಕ್ಕಳ ದಸರಾ 2024ರ ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾಳೆ.

ಈಕೆ ಹಿರಿಯ ಚಿತ್ರಕಲಾವಿದ ಮತ್ತು ರಂಗಕರ್ಮಿ ಯಾಗಿದ್ದ ಶಶಿಧರ ಆಚಾರ್ಯ ಕೆ. ಮತ್ತು ಶ್ರೀಮತಿ ಶುಭ ಎನ್. ರವರ ಪುತ್ರಿ. ಅನಿಸಿಕಾ ಆಚಾರ್ಯ ರೋಟರಿ ಶಾಲಾ ಪ್ರಾಥಮಿಕ ವಿಭಾಗದ ಚಿತ್ರಕಲಾ ಕ್ಷೇತ್ರದ ಕಲಾವಿದೆ.