ಸುಳ್ಯ ದುಲ್ಫಕಾರ್ ದಫ್ ಅಸೋಸಿಯೇಷನ್ ವತಿಯಿಂದ ಅಗಲಿದ ಸಾರಥಿಗಳ ಅನುಸ್ಮರಣೆ

0

ಸುಳ್ಯ: ಕಳೆದ ಮೂರು ದಶಕಗಳಿಂದ ಹಲವಾರು ಧಾರ್ಮಿಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರುವಾಸಿಯಾದ ದುಲ್ಫಕಾರ್ ದಫ್ ಅಸೋಸಿಯೇಷನ್ (ರಿ)
ಇದರ ವತಿಯಿಂದ ಅಗಲಿದ ಸಂಸ್ಥೆಯ ಸಾರಥ್ಯವನ್ನು ವಹಿಸಿದಂತಹ ವ್ಯಕ್ತಿಗಳ ಅನುಸ್ಮರಣಾ ಕಾರ್ಯಕ್ರಮ ಅ 18 ರಂದು ಹಮ್ಮಿಕೊಳ್ಳಲಾಯಿತು.

ಗಾಂಧಿನಗರದ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಭವನದಲ್ಲಿ
ನಡೆದ ಈ ಕಾರ್ಯಕ್ರಮದಲ್ಲಿ
ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಕೊಡಿಯಮ್ಮೆ ಯವರು ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಸಾರಥ್ಯವನ್ನು ವಹಿಸಿ ನಮ್ಮನ್ನಗಲಿದ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ
ಮರ್ಹೂಂ ಸತ್ತಾ‌ರ್ ಸಂಗಂ, ಮರ್ಹೂಂ ಬಶೀರ್ ಕಾರ್ಲೆ, ಸ್ಥಾಪಕ ಸದಸ್ಯರುಗಳಾದ
ಮರ್ಹೂಂ ಶರೀಫ್‌ ಜಟ್ಟಿಪಳ್ಳ, ಮರ್ಹೂಂ ಕಲಂದರ್ ಮಾಂಬ್ಳಿ ಹಾಗೂ ಎಲ್ಲಾ ಹಿತೈಷಿಗಳ ಪಾರತ್ರಿಕ ಜೀವನ ಸುಗಮವಾಗಲು ಯಾಸಿನ್ ಪಾರಾಯಣ ಮತ್ತು ದುಃಆ ನೆರವೇರಿಸಲಾಯಿತು. ಪ್ರಾರ್ಥನೆಗೆ ಸಮದ್ ಸಆದಿ ಉಸ್ತಾದ್ ರವರು ನೇತೃತ್ವವನ್ನು ನೀಡಿದರು.

ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ
ಕೆ ಎಂ ಎಸ್ ಮಹಮ್ಮದ್ ಹಾಜಿ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ
ಅಬ್ದುಲ್ ರಹಿಮಾನ್ ಮೊಗರ್ಪಣೆ.
ಗಾಂಧಿನಗರ ಜುಮಾ ಮಸೀದಿ ಯ ಮಾಜಿ ಅಧ್ಯಕ್ಷ ಹಾಜಿ ಮುಸ್ತಫ ಕೆ.ಎಂ. ಮಾಜಿ ಪ್ರಧಾನ ಕಾರ್ಯದರ್ಶಿಯಾದ ಕೆ. ಬಿ. ಅಬ್ದುಲ್ ಮಜೀದ್, ಅನ್ಸಾರ್ ಉಪಾಧ್ಯಕ್ಷರಾದ ಜುನೈದ್ ನಾರ್ಕೊಡು,
ಹಾಗೂ ಸಂಸ್ಥೆಯ ಮತ್ತು ಅಗಲಿದ ಸಾರಥಿಗಳ ಕುಟುಂಬಸ್ಥರು ಅಲ್ಲದೆ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹನೀಪ್ ನ್ಯಾಷನಲ್ ಸ್ವಾಗತಿಸಿ ಅಬ್ದುಲ್ ಕಲಾಂ ವಂದಿಸಿದರು.