ನಿವೃತ್ತ ನೌಕರರಿಗೆ ಸರಕಾರದಿಂದ ಅನ್ಯಾಯ : ಹೋರಾಟದ ಕುರಿತು ಅ.24ರಂದು ಪೂರ್ವಾಭಾವಿ ಸಭೆ

0

01-07-2022 ರಿಂದ 31 -07-2024 ರ ಮಧ್ಯೆ ನಿವೃತ್ತರಾದ ರಾಜ್ಯ ಸರ್ಕಾರದ ನೌಕರರಿಗೆ ಇತ್ತೀಚೆಗೆ ಜಾರಿಯಾದ 7 ನೇ ವೇತನ ಆಯೋಗದಲ್ಲಿ ಸರ್ಕಾರದ ಕಡೆಯಿಂದ ಆರ್ಥಿಕ ನಷ್ಟ ಉಂಟಾಗಿರುತ್ತದೆ. ಇದಕ್ಕಾಗಿ ರಾಜ್ಯ, ಜಿಲ್ಲೆ, ತಾಲೂಕು ಹಂತದಲ್ಲಿ ಅನ್ಯಾಯಕ್ಕೊಳಗಾದ ನಿವೃತ್ತ ಸರ್ಕಾರಿ ನೌಕರರ ವೇದಿಕೆಯನ್ನು ರಚಿಸಿಕೊಂಡು ಕಳೆದ ಮೂರು ತಿಂಗಳಿನಿಂದ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸೇರಿದಂತೆ ಎಲ್ಲಾ ಸಚಿವರಿಗೆ, ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ, ಅಧಿಕಾರಿಗಳಿಗೆ ಮನವಿಯನ್ನು ಕೊಡಲಾಗುತ್ತಿದೆ. ಹಾಗಿದ್ದರೂ, 35-40 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರ ಮನವಿಗೆ ಸ್ಪಂದಿಸುತ್ತಿಲ್ಲ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಅ.24ರಂದು ಪೂ.10.30ಕ್ಕೆ ಸಂಧ್ಯಾರಶ್ಮಿ ಯಲ್ಲಿ ಸಭೆ ಕರೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.