ಸುಳ್ಯ ಆಂಬುಲೆನ್ಸ್ ಚಾಲಕರ ಮಾಲಕ ಸಂಘದ ಸದಸ್ಯರು ಸುಳ್ಯ ಪೊಲೀಸ್ ಠಾಣೆ ಮತ್ತು ಸರಕಾರಿ ಆಸ್ಪತ್ರೆಗೆ ಭೇಟಿ

0

ಎಸ್ ಐ ಸಂತೋಷ್ ಹಾಗೂ ವೈದ್ಯಾಧಿಕಾರಿ ಕರುಣಾಕರ್ ರವರೊಂದಿಗೆ ಸಮಾಲೋಚನೆ

ಸುಳ್ಯದಲ್ಲಿ ಇತ್ತೀಚಿಗೆ ಸ್ಥಾಪನೆಗೊಂಡ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಫದ ಸದಸ್ಯರು ಅ 22 ರಂದು ಸುಳ್ಯ ಪೊಲೀಸ್ ಠಾಣೆ ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಠಾಣಾ ಉಪನಿರೀಕ್ಷಕರಾದ ಸಂತೋಷ್ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿ ಕರುಣಾಕರ್ ರವರೊಂದಿಗೆ ಸಮಾಲೋಚನೆ ನಡೆಸಿರು.

ತುರ್ತು ಸಂಧರ್ಭಗಳಲ್ಲಿ ಸಂಘಟನೆ ವತಿಯಿಂದ ಇಲಾಖೆಗೆ ಯಾವುದೆಲ್ಲಾ ರೀತಿಯಲ್ಲಿ ನಮ್ಮ ಸದಸ್ಯರನ್ನು ತೊಡಗಿಸಿಕ್ಕೊಳ್ಳಬಹುದು ಮತ್ತು ಸಾರ್ವಜನಿಕ ಸೇವೆಗೆ ಸಂಘಟನೆ ಇಲಾಖೆಯೊಂದಿಗೆ ಸದಾ ಸ್ಪಂದಿಸುವ ವಿಶ್ವಾಸವನ್ನು ಅಧಿಕಾರಿಗಳೊಂದಿಗೆ ವ್ಯಕ್ತ ಪಡಿಸಿದರು.
ಈ ವೇಳೆ ಸಂಘದ ವತಿಯಿಂದ ಅಧಿಕಾರಿಗಳಿಗೆ ಮೆಮೆಂಟೋ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಉನೈಸ್ ಪೆರಾಜೆ,ಗೌರವ ಅಧ್ಯಕ್ಷ ಶಿವ ಪ್ರಸಾದ್, ಪ್ರ ಕಾರ್ಯದರ್ಶಿ ಸಿದ್ಧಿಕ್ ಗೂನಡ್ಕ, ಕಾರ್ಯದರ್ಶಿ ರಫೀಕ್ ಬಾಳೆಮಕ್ಕಿ,ಸದಸ್ಯರುಗಳಾದ ಸಿದ್ದೀಕ್ ಜಟ್ಟಿಪಳ್ಳ, ಸಮೀರ್ ಕಾಣಿಯೂರು, ಶಮಿಮ್ ಸುಳ್ಯ, ಪ್ರದೀಪ್ ಸುಬ್ರಹ್ಮಣ್ಯ, ಶಿವ ಬೆಳ್ಳಾರೆ, ಜಯಪ್ರಕಾಶ್ ಸುಳ್ಯ,ರಾಜೇಶ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.