ಪ್ರಯತ್ನದ ಫಲವಾಗಿ ಸುಳ್ಯಕ್ಕೆ ಅವಕಾಶ ಒದಗಿದೆ
ಸುಳ್ಯದ ಅಭಿವೃದ್ಧಿಗಾಗಿ ಇದು ಸಹಕಾರಿಯಾಗಲಿದೆ : ನಾಯಕರುಗಳ ಒಮ್ಮತದ ಮಾತು

ಸುಳ್ಯ ನಗರ ಯೋಜನೆ ಅಧಿಕಾರದ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಮುಸ್ತಫಾ ಜನತಾ ರವರ ಅಧಿಕಾರ ಸ್ವೀಕಾರ ಸಮಾರಂಭ ಮಾ. ೧೭ ರಂದು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ನೂತನ ಸೂಡಾ ಅಧ್ಯಕ್ಷ ಮುಸ್ತಫಾ ರವರಿಗೆ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು ಸುಳ್ಯದ ಜನತೆಗೆ ಪ್ರಾಧಿಕಾರವು ಬಹಳ ಪ್ರಯೋಜನಕಾರಿಯಾಗಲಿದೆ.ಸುಳ್ಯದ ಜನತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೆ ಮಂಗಳೂರಿಗೆ ಬರಬೇಕಾದ ಅವಶ್ಯಕತೆ ಇರುತ್ತಿತ್ತು. ಅಲ್ಲದಿದ್ದಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸುಳ್ಳಕ್ಕೆ ಬರುವುದನ್ನು ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಸುಳ್ಯದಲ್ಲಿಯೇ ಕಚೇರಿ ಮತ್ತು ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಗಳು ಅಧಿಕಾರಿಗಳನ್ನು ಒಳಗೊಂಡ ಕಚೇರಿ ಆಗಲಿದ್ದು ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಅದೇ ರೀತಿ ಉತ್ತಮ ಕೆಲಸ ಕಾರ್ಯಗಳ ಜೊತೆಗೆ ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಸುಳ್ಯದಲ್ಲಿ ಉತ್ತಮ ಕಾರ್ಯವನ್ನು ಮಾಡಲಿ ಎಂದು ಶುಭಾರೈಸಿದರು.

ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಳ್ಯದ ಹಲವಾರು ಸಂಘ ಸಂಸ್ಥೆಗಳ ಮುಖಂಡರು ನಗರ ಪಂಚಾಯತಿನ ಸದಸ್ಯರುಗಳು ಸಿಬ್ಬಂದಿ ವರ್ಗದವರು ರಾಜಕೀಯ ಪಕ್ಷಗಳ ಹಿರಿಯ ಕಿರಿಯ ಮುಖಂಡರುಗಳು ಹಾಗೂ ಮುಸ್ತಫಾರವರ ಅಭಿಮಾನಿ ಬಳಗದವರು ಹೂಗುಚ್ಛ ಹಾಗೂ ಹಾರವನ್ನು ಹಾಕಿ ನೂತನ ಅಧ್ಯಕ್ಷರಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ನ. ಪಂ ಸದಸ್ಯ ಎಂ ವೆಂಕಪ್ಪಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಹೀದ್, ರಾಜ್ಯ ಪ್ರಶಸ್ತಿ ವಿಜೇತ ಕೆ ಗೋಕುಲ್ ದಾಸ್ ರವರು ಈ ಸಂದರ್ಭದಲ್ಲಿ ಮಾತನಾಡಿ ‘ಮುಸ್ತಫಾರವರ ಕಠಿಣ ಪರಿಶ್ರಮ ಮತ್ತು ಅವರು ಹೊಂದಿದ ಉತ್ತಮ ಗುರಿಯಿಂದ ಸುಳ್ಳಕ್ಕೆ ಇಂದು ಸೂಡಾ ಪ್ರಾಧಿಕಾರವನ್ನು ಸುಳ್ಳಕ್ಕೆ ಬರುವಂತೆ ಮಾಡಿದ್ದಾರೆ.ಅವರು ಸರ್ವ ಜನತೆಯಿಂದ ಹಾಗೂ ರಾಜಕೀಯ ವ್ಯತ್ಯಾಸಗಳಿಲ್ಲದೆ ಸರ್ವರಿಂದಲೂ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದವರು.ಅವರು ಈ ಸ್ಥಾನಕ್ಕೆ ಅರ್ಹರಾಗಿದ್ದು ಮುಂದಿನ ದಿನಗಳಲ್ಲಿ ಸುಳ್ಯದ ಅಭಿವೃದ್ಧಿಗೆ ಇವರು ಪರಿಪೂರ್ಣವಾದ ಪ್ರಯತ್ನವನ್ನು ಮಾಡಲಿದ್ದಾರೆ ಮತ್ತು ಅವರೊಂದಿಗೆ ನಮ್ಮ ಸಹಕಾರವು ಇರುತ್ತದೆ ಎಂದು ಒಮ್ಮತದ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಮುಸ್ತಫಾ ರವರು ಸುಳ್ಯದ ಪ್ರತಿಯೊಬ್ಬರ ಸಹಾಯ ಸಹಕಾರ,ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಸಚಿವರಾದ ಬೈರತಿ ಸುರೇಶ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರು,ಜಿ ಕೃಷ್ಣಪ್ಪ ಈಗೆ ಇನ್ನೂ ಅನೇಕ ಮುಖಂಡರುಗಳ, ಸಹಕಾರದಿಂದ ಸುಡಾ ಅಧಿಕಾರವನ್ನು ಸುಳ್ಯಕ್ಕೆ ತರಲು ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಜನ ಪ್ರತಿನಿಧಿಗಳ ಸಲಹೆ, ಸೂಚನೆಗಳನ್ನು ಪಡೆದು ಸುಳ್ಳದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಿದ್ದೇನೆ ಎಂದು ಹೇಳಿದರು. ಪ್ರಪ್ರಥಮವಾಗಿ ಬಹು ವರ್ಷಗಳ ಬೇಡಿಕೆಯಲ್ಲಿರುವ ಬಡವರ ಆಶ್ರಯ ಯೋಜನೆ ಬಗ್ಗೆ ಮಾಹಿತಿ ಪಡೆದು ನಿರಾಶ್ರಿತರಿಗೆ ಮನೆ ವ್ಯವಸ್ಥೆಯನ್ನು ಮಾಡುವ ಕೆಲಸ ಮಾಡಬೇಕಾಗಿದೆ. ಅಲ್ಲದೆ ಟೌನ್ ಹಾಲ್ ಸಭಾಂಗಣ ಅಭಿವೃದ್ಧಿ, ಒಳಚರಂಡಿಯ ವ್ಯವಸ್ಥೆಗಳು, ಪೌರಕಾರ್ಮಿಕರಿಗೆ ನಿವೇಶನ ಈಗೆ ಇರುವ ಬಹು ಮುಖ್ಯ ಸಮಸ್ಯೆಗಳಿಗೆ ಮೊದಲ ಆದ್ಯತೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಬೇಕಾಗಿದೆ ಎಂದರು.ಮುಖಂಡ ಶಶಿಧರ ಎಂ ಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಮಾರಂಭದಲ್ಲಿ ನಗರ ಪಂಚಾಯತ್ ಸದಸ್ಯರುಗಳು,ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಯಾರೆಂಟಿ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಪಿ ಎಸ್ ಗಂಗಾಧರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ಅರಂಬೂರು, ಕರ್ನಾಟಕ ಸರಕಾರ ಕೆಪೆಕ್ ಮಾಜಿ ನಿರ್ದೇಶಕ ಪಿ ಎ ಮಹಮ್ಮದ್, ಕಾಂಗ್ರೆಸ್ ಪಕ್ಷದ ಮುಖಂಡ ರಾಧಾಕೃಷ್ಣ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು.