ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಯಲ್ಲಿ ರಂಗತರಂಗ – ಬೇಸಿಗೆ ಶಿಬಿರ

0

ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಯಲ್ಲಿ ಏಳು ದಿನಗಳ ಬೇಸಿಗೆ ಶಿಬಿರ ರಂಗ ತರಂಗ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ರಾಧಾಕೃಷ್ಣ ರಾವ್ ಯು ವಹಿಸಿ ಇನ್ನಷ್ಟು ಹೊಸತನ ಬರಲಿ. ರಂಗ ತರಂಗ ಅಲೆ ಅಲೆಯಾಗಿ ಸಾಗಲಿ ಎಂದು ಶುಭಹಾರೈಸಿದರು.

ಶಾಲಾ ಸಂಚಾಲಕರಾದ ಪಿ.ಜಿ.ಎಸ್.ಎನ್. ಪ್ರಸಾದ್ ಕಾರ್ಯಕ್ರಮವನ್ನು
ದೀಪ ಬೆಳಗಿಸಿ ಉದ್ಘಾಟಿಸಿ, ಶುಭ
ಕೋರಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಕೈಂತಜೆ ರಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಚಿನ್ ಶರ್ಮಾ ಮತ್ತು ಉದಯ ಭಾಸ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾ ಬೋಧಿನೀ ವಿದ್ಯಾ ಸಂಸ್ಥೆಗಳು ಬಾಳಿಲ ಇದರ ನೂತನ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿ, ಸಹಶಿಕ್ಷಕಿ ಶುಭಾ ಡಿ ವಂದಿಸಿದರು. ಸಹ ಶಿಕ್ಷಕಿ ಸಹನಾ ಬಿ.ಬಿ ನಿರೂಪಿಸಿದರು.

ಏಳು ದಿನಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ಭಾಷಣ ಕಲೆ, ನಿರೂಪಣೆ, ಸಾಹಿತ್ಯ, ಮುಖವರ್ಣಿಕೆ, ಮುಖವಾಡ ತಯಾರಿ, ರಂಗತರಬೇತಿ, ಕ್ರಾಪ್ಟ್, ವ್ಯಕ್ತಿ ವಿಕಸನ, ನಾಯಕತ್ವ, ಮಕ್ಕಳ ಜಾತ್ರೆ, ಹೊರ ಸಂಚಾರ ಮುಂತಾದ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.