
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವವು ಏ.6 ರಂದು ನಡೆಯಿತು.

ಆ ಪ್ರಯಕ್ತ ಸಂಜೆ ದೇವಳದಿಂದ ಕಾಶಿಕಟ್ಟೆ ಮಹಾ ಗಣಪತಿ ಸನ್ನಿಧಾನದವರೆಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಆ ಬಳಿಕ ಕಾಶಿಕಟ್ಟೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಆಶ್ಲೇಷ ವಸತಿ ಗೃಹದ ಮುಂಭಾಗದಲ್ಲಿರುವ ಬಂಡಿವಾಳ ಕಟ್ಟೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕಟ್ಟೆಪೂಜೆ ನೆರವೇರಿತು. ಪೂಜಾ ವಿಧಿಯನ್ನು ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿಯವರು ಉಪಸ್ಥಿತರಿದ್ದರು.