ಹಿರಿಯ ವಿದ್ವಾಂಸ ವಾಲೆ ಮುಂಡೋವ್ ಉಸ್ತಾದ್ ರವರಿಂದ ಸಾಮೂಹಿಕ ಪ್ರಾರ್ಥನೆ, ಸಾವಿರಾರು ಮಂದಿ ಭಾಗಿ
ಜಾಲ್ಸೂರು-ಅಡ್ಕಾರು ದರ್ಗಾ ದಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭ ಎಪ್ರಿಲ್ 14 ರಂದು ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪನ್ನ ಗೊಂಡಿತು.

ಉರೂಸ್ ಸಮಾರೋಪ ಸಮಾರಂಭದ ಸಾಮೂಹಿಕ ಪ್ರಾರ್ಥನೆಯನ್ನು ಹಿರಿಯ ವಿದ್ವಾಂಸ ಶೈಖುನಾ ಮಹ್ ಮೂದುಲ್ ಫೈಝಿ ವಾಲೆ ಮುಂಡೋವು ಉಸ್ತಾದ್ ರವರು ನೆರವೇರಿಸಿದರು.
ಮುಖ್ಯ ಪ್ರಭಾಷಣ ಕಾರರಾಗಿ ಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ರವರು ಭಾಗವಹಿಸಿ (ಖಿಯಾಮತ್ ದಿನ) ಲೋಕ ಅಂತ್ಯ ದಿನದ ಕುರಿತು ಪ್ರಭಾಷಣ ನಿರ್ವಹಿಸಿ ‘ಪ್ರತಿಯೋರ್ವ ಮನುಷ್ಯನಿಗೂ ಮರಣ ಕಡ್ಡಾಯವಾಗಿದ್ದು ಅದು ಬರುವ ಮುನ್ನ ನಮ್ಮ ಜೀವನವನ್ನು ಪಾವನ ಗೊಳಿಸುವ ಸತ್ಕಾರ್ಯ ಗಳನ್ನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಾವಿರರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಗಾ ಝಿಯಾರತ್ ನಡೆಸಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ಎ.12ರಂದು ಜಾಲ್ಸೂರು ಉರೂಸ್ ಸಮಿತಿ ಅಧ್ಯಕ್ಷ
ಅಬ್ಬಾಸ್ ಹಾಜಿ ಕದಿಕಡ್ಕ
ಧ್ವಜಾರೋಹಣ ನೆರವೇರಿಸುವುದರೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಿದ್ದರು.
ರಾತ್ರಿ ನಡೆದ ಉರೂಸ್ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ದುಃವಾ ನೆರವೇರಿಸಿದ್ದರು.ಖ್ಯಾತ ವಾಗ್ಮಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಪ್ರಭಾಷಣ ಮಾಡಿದರು.
ಎ.13 ರಂದು ಉರೂಸ್ ಅಂಗವಾಗಿ ದರ್ಗಾದಲ್ಲಿ ದ್ಸಿಕ್ರ್ ನೇರ್ಚೆ ನಡೆದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು
ದುಃವಾ ನೆರವೇರಿಸಿದರು.
ಧಾರ್ಮಿಕ ಪಂಡಿತ ಹಾಗೂ ವಾಗ್ಮಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಪ್ರಭಾಷಣದಲ್ಲಿ ಭಾಗವಹಿಸಿದ್ದರು.
ಉರೂಸ್ ಸಮಿತಿ ಅಧ್ಯಕ್ಷ
ಅಬ್ಬಾಸ್ ಹಾಜಿ ಕದಿಕಡ್ಕ ಅಧ್ಯಕ್ಷತೆ ವಹಿಸಿದ್ದರು.
ಜಮಾಅತ್ ಸಮಿತಿ ಅಧ್ಯಕ್ಷ ಜಿ ಪಿ ಅಬ್ದುಲ್ಲಾ ಕುಂಞಿ,ಪ್ರ. ಕಾರ್ಯದರ್ಶಿ ಸಿ ಪಿ ರಜ್ಜಾಕ್,ಎಂಜೆಎಂ ಜಾಲ್ಸೂರು ಖತೀಬರಾದ
ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್, ಸದರ್ ಮುಅಲ್ಲಿಮ್ ಜುನೈದ್ ಹಿಮಮಿಸಖಾಫಿ,ಮುಅಲ್ಲಿಂಗಳಾದ ಸಾಧಿಕ್ ಫಾಲಿಲಿ ಕುಂಬ್ರ, ರಶೀದ್ ಮದನಿ, ಮುಅದ್ದೀನ್ ಹಬೀಬ್ ಹಿಮಮಿ,ರಾಜ್ಯ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮೊದಲಾದ ಉಮಾರಾ, ಉಲಮಾ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಜಮಾಅತ್ ಸದಸ್ಯರು,ಯುವಕರು ಸಹಕರಿಸಿದರು.