ಜೇಸಿಐ ಸುಳ್ಯ ಪಯಸ್ವಿನಿಯ ‘ಜೇಸಿಐ ಸಪ್ತಾಹ ‘ ವಿದ್ಯಾರ್ಥಿವಿದ್ಯಾರ್ಥಿಗಳಿಗಾಗಿ ಚದುರಂಗ ಸ್ಪರ್ಧೆ

0

ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಜೇಸಿಐ ಸಪ್ತಾಹ ದ ಅಂಗವಾಗಿ ತಾಲ್ಲೂಕು ಮಟ್ಟದ ಚದುರಂಗ ಸ್ಪರ್ಧೆ ಯನ್ನು ಸೆ. 11 ರಂದು ಕಾನತ್ತಿಲ ದೇವಮ್ಮ ಸಂಕೀರ್ಣ ಶ್ರಿ ರಾಂ ಪೇಟೆ ಸುಳ್ಯ ಇಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉಧ್ಘಾಟನೆಯನ್ನು ದೀಪ ಬೆಳಗುವ ಮೂಲಕ ಜೇಸಿ ಗಿರೀಶ್ ನಾರ್ಕೋಡು ಉದ್ಘಾಟಿಸಿ ಶುಭಾಹಾರೈಸಿದರು. ಮುಖ್ಯ ಅತಿಥಿಗಳಾಗಿ ಜೇಸಿ ಜಯಪ್ರಕಾಶ್ ಕೆ ಪ್ರಾಂಶುಪಾಲರು ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ, ನಿಕಟಪೂರ್ವ ಅಧ್ಯಕ್ಷ ಗುರುರಾಜ್ ಅಜ್ಜಾವರ, ಯೋಜನಾ ನಿರ್ದೇಶಕ ಜೇಸಿ ಅನಿಲ್ ಕರ್ಲಪ್ಪಾಡಿ ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿಯ ಸಾರಥಿ ಜೇಸೀ ರಂಜಿತ್ ಕುಕ್ಕೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.


ಸಪ್ತಾಹದ ನಿರ್ದೇಶಕಿ ಜೇಸಿ ಶೋಭಾ ಅಶೋಕ್ ಚೂಂತರ್ ವರದಿ ವಾದಿಸಿದರು.
ಈ ಸಂದರ್ಭಲ್ಲಿ ಜೇಸಿಐ ಪೂರ್ವ ವಲಾಯಾದ್ಯಕ್ಷರಾದ ಜೇಸಿ ಅಶೋಕ್ ಚೂಂತರ್, ಪೂರ್ವ ಅಧ್ಯಕ್ಷರಾದ ಜೇಸಿ ದೇವರಾಜ ಕುದ್ಪಾಜೆ, ಜೇಸಿ ರವಿಕುಮಾರ್ ಅಕ್ಕೋಜಿಪಾಲ್, ಜೇಸಿ ತಾರಾ ಮಾದವ ಗೌಡ, ಜೇಸಿ ಗೀತಾಂಜಲಿ ಗುರುರಾಜ್ ಅಜ್ಜವರ, ರಲ್ಲದೆ ಶಾಲೆ, ಕಾಲೇಜು ಚದುರಂಗ ಸ್ಪರ್ಧೆ ವಿದ್ಯಾರ್ಥಿ ಗಳು, ಪೋಷಕರು ಉಪಸ್ಥಿತರಿದ್ದರು.


ಜೇಸಿಐ ಖಜಾಂಚಿ ಜೇಸಿ ಸುರೇಶ್ ಕಾಮತ್ ವೇದಿಕೆಗೆ ಆಹ್ವಾನಿಸಿ, ಜೇಸಿ ಪ್ರಸನ್ನ ಕುಮಾರ್ ಜೇಸಿ ವಾಣಿ ಪಠಿಸಿ, ಕಾರ್ಯದರ್ಶಿ ಜೇಸಿ ನವೀನ್ ಕುಮಾರ್ ವಂದಿಸಿದರು.