ಬೆಂಗಳೂರಿನ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ ಕನ್ಸರ್ವೇಟಿವ್ ಡೆಂಟಿಸ್ಟ್ರೀಯಲ್ಲಿ ಫೋಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿರುವ ಡಾ.ಕಿರಣ್ ಕುಮಾರ್ ಇವರು ಮಂಡಿಸಿದ ಇನೋವೇಟಿವ್ ಸರ್ಫೆಸ್ ಟ್ರೀಟ್ಮೆಂಟ್ ಫರ್ ಝೀರ್ಕೊನಿಯಾ ಬೆಸ್ಡ್ ಮೆಟೀರಿಯಲ್ಸ್ ಟು ಆಲ್ಟರ್ ದಿ ಸರ್ಫೇಸ್ ಡೈನಮಿಕ್ಸ್ ಸೋ ಆಸ್ ಟು ಎನ್ಹಾನ್ಸ್ ದಿ ಅಡೆಶನ್ ವಿದ್ ವೆನೀರಿಂಗ್ ಸೆರಾಮಿಕ್ಸ್’ ಎಂಬ ಪ್ರಬಂಧಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಗೌರವಿಸಿದೆ.
ಡಾ.ಕಿರಣ್ ಕುಮಾರ್ ರವರು ಬೆಂಗಳೂರಿನ ಸರಕಾರಿ ದಂತ ಮಹಾವಿದ್ಯಾಲಯದ ಪ್ರಾಸ್ಥೊಡಾಂಟಿಕ್ಸ್ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಡಾ.ಅನೂಪ್ ನಾಯರ್ರವರು ಮಾರ್ಗದರ್ಶನ ಪ್ರಬಂಧ ಸಿದ್ಧಪಡಿಸಿದ್ದರು. ಡಾ. ಕಿರಣ್ ಕುಮಾರ್ರವರು ಸುಳ್ಯದ ಮೊಗರ್ಪಣೆ ನಿವಾಸಿ ಶ್ರೀಮತಿ ಗಿರಿಜ ನೀಲಕಂಠಪ್ಪರವರ ಪುತ್ರ.