ವಾಸುದೇವ ಗೌಡ ಚಾರ್ಮತರವರ ವೈಕುಂಠ ಸಮಾರಾಧನೆ

0

ನಾಲ್ಕೂರು ಗ್ರಾಮದ ವಾಸುದೇವ ಗೌಡ ಚಾರ್ಮತ ಅವರ ವೈಕುಂಠ ಸಮಾರಾಧನೆಯು ಜೂ.14 ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಮೃತರ ಬಗ್ಗೆ ವಿಜಯಕುಮಾರ್ ಚಾರ್ಮತ ಮತ್ ನುಡಿನಮನ ಅರ್ಪಿಸುತ್ತಾ ಮಾತನಾಡಿ ಮಾಸುದೇವ ಅವರು ಚಿಕ್ಕಂದಿನಿಂದಲೇ ಒಬ್ಬ ಕಲಾವಿದನಾಗಿ, ಚಿತ್ರ ಕಲೆ, ನಾಟಕಗಳನ್ನು ಮಾಡುತಿದ್ದರು. ಆಧ್ಯಾತ್ಮಿಕದಲ್ಲಿ ವಿಶೇಷ ಜ್ಞಾನವನ್ನು ಹೊಂದಿದ್ದರು. ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸಹೃದಯಿ ಎಂದರು. ಚಂದ್ರಶೇಖರ ಬಾಳುಗೋಡು ನುಡಿನಮನ ಅರ್ಪಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.