ಗೂನಡ್ಕ ಎಸ್. ಕೆ.ಎಸ್.ಎಸ್.ಎಫ್. ಶಾಖೆಯ ವತಿಯಿಂದ ಸಮಸ್ತ ಸ್ಥಾಪನಾ ದಿನಾಚರಣೆ

0


ಎಸ್. ಕೆ.ಎಸ್.ಎಸ್.ಎಫ್. ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸ್ಥಾಪನಾ ದಿನ ಆಚರಣೆ ನಡೆಯಿತು. ಮಖಾಂ ಝಿಯಾರತ್, ಧ್ವಜಾರೋಹಣ, ಸಮಸ್ತದ ೯೭ ವರ್ಷಗಳ ಕಾಲ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿ ಮುಂದೆಯೂ ಕೂಡ ಗಟ್ಟಿಯಾಗಿ ಸಮಸ್ತದ ಜೊತೆ ಗುರುತಿಸಿ ಎಂದು ಪೇರಡ್ಕ ಖತೀಬರಾದ ರಿಯಾಝ್ ಫೈಝಿ ಹೇಳಿದರು.


ದ್ವಜಾರೊಹಣವನ್ನು ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ. ಕೆ ಉಮ್ಮರ್ ನೆರವೇರಿಸಿದರು. ಎಸ್. ಕೆ. ಎಸ್ ಎಸ್ ಎಪ್ ಶಾಖೆ ಅದ್ಯಕ್ಷರಾದ ಸಾಜಿದ್ ಅಝ್ಹರಿ ಅಧ್ಯಕ್ಷತೆ ವಹಿಸಿದರು. ಜಮಾಅತ್ ಉಪಾದ್ಯಕ್ಷರಾದ ಟಿ. ಬಿ ಹನೀಫ್, ಅಲ್ತಾಪ್ ಗೂನಡ್ಕ ಶಂಸುದ್ದೀನ್ ಡ್ರೈವರ್ ಮಿದ್ಲಾಝ್ ದಾರಿಮಿ, ಅಬ್ಬಾಸ್ ಮುಸ್ಲಿಯಾರ್ ಉಸ್ಮಾನ್ ಪಾಂಡಿ ಸಾದುಮಾನ್ ತೆಕ್ಕಿಲ್ ಉಸ್ಮಾನ್ ಗಡಿಕಲ್ಲು. ಹಾಗೂ ಜಮಾಅತರು ಮದ್ರಸ ಮಕ್ಕಳು ಇದ್ದರು. ಶಾಖೆಯ ಪ್ರಧಾನ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿ, ಸಾದುಮಾನ್ ತೆಕ್ಕಿಲ್ ವಂದಿಸಿದರು.