ಬಹುಭಾಷಾ ನಟ ಭರತ್ ಭೋಪಣ್ಣರವರಿಗೆ ಬೆಳ್ಳಾರೆಯ ನೆಟ್ಟಾರಿನ ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ

0

ಜೀ ಕನ್ನಡ ಚಾನಲ್ ನ ಬ್ರಹ್ಮಗಂಟು ಧಾರವಾಹಿಯ ಲಕ್ಕಿ ಖ್ಯಾತಿಯ ಬಹು ಭಾಷಾ ನಾಯಕ ನಟ ಭರತ್ ಭೋಪಣ್ಣ ಅವರು ಇತ್ತೀಚಿಗೆ ಬೆಳ್ಳಾರೆಯ ನೆಟ್ಟಾರಿನ ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚ ಕರ್ಮ ಚಿಕಿತ್ಸೆಗೆ ದಾಖಲಾಗಿದ್ದರು.


ಇವರು ವಿಜಯಾನಂದ ಡೆಮೋ ಪೀಸ್ ಗಿರಿಜಾ ಕಲ್ಯಾಣ ಇತ್ಯಾದಿ ಕನ್ನಡ, ತೆಲುಗು, ತಮಿಳು, ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟರಾಗಿದ್ದಾರೆ. ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ನಿರ್ಗಮಿಸುವ ವೇಳೆ ಆಸ್ಪತ್ರೆಯ ಸಂಸ್ಥಾಪಕ ವೈದ್ಯರಾದ ಡಾ. ತಿರುಮಲೆಶ್ವರ ಭಟ್ ಶಾಂತಿಮೂಲೆ ಇವರು ಭರತ್ ಭೋಪಣ್ಣರವರಿಗೆ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ. ತಿರುಮಲೇಶ್ವರ ಭಟ್ ಶಾಂತಿಮೂಲೆ, ಡಾ. ಅವಿನಾಶ್ ಶಾಂತಿಮೂಲೆ, ಡಾ. ಜಯಶ್ರೀ ಭಟ್, ಡಾ. ಅನಿತಾ ಹಾಗೂ ಸಿಬ್ಬಂದಿ ವರ್ಗಕ್ಕೆ ಭರತ್ ಭೋಪಣ್ಣ ಅವರು ಧನ್ಯವಾದಗಳನ್ನು ತಿಳಿಸಿದರು.


ಖ್ಯಾತ ನಿರ್ದೇಶಕರಾದ ಎ ಎಲ್ ವಿಜಯ್ ಅವರ ನಿರ್ದೇಶನದಲ್ಲಿ ಬಹುಭಾಷಾ ಚಲನಚಿತ್ರ “Mission -chaaptar -1” ಇದರಲ್ಲಿ ಭರತ್ ಭೋಪಣ್ಣನವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅತೀ ಶೀಘ್ರದಲ್ಲಿ ತೆರೆಯ ಮೇಲೆ ಬರಲಿದೆ.