ನಿವೃತ್ತ ಅಮೀನ್ ನಾರಾಯಣ ನಾಯ್ಕ ಚಾಕೊಟೆಡ್ಕ ನಿಧನ

0


ನಿವೃತ್ತ ಅಮೀನ್ ಮುಪ್ಪೇರ್ಯ ಗ್ರಾಮದ ಚಾಕೊಟೆಡ್ಕ ನಾರಾಯಣ ನಾಯ್ಕರು ಅಸೌಖ್ಯದಿಂದ ಜು. 16ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಇವರು ಅಮೀನ್ ಆಗಿ ಸುಳ್ಯ, ಪುತ್ತೂರು, ಬಿ.ಸಿ. ರೋಡ್, ಕಾರ್ಕಳ ಕೋರ್ಟ್ ಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶ್ರೀಮತಿ ಲಲಿತಾ, ಪುತ್ರರಾದ ಶಶಿಧರ ಚಾಕೊಟೆಡ್ಕ, ರೋಹಿತ್ ಚಾಕೊಟೆಡ್ಕ, ಯಶವಂತ ಚಾಕೊಟೆಡ್ಕ, ಪುತ್ರಿ ಶ್ರೀಮತಿ ಸುನಿತಾ ವಸಂತ್ ಕಲ್ಲಡ್ಕ, ಸಹೋದರ ವೆಂಕಪ್ಪ ನಾಯ್ಕ ಬೇರ್ಯ, ಪಂಜ, ಇಬ್ಬರು ಸಹೋದರಿಯರು, ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ