ದೊಡ್ಡತೋಟ : ಗೂಡಂಗಡಿಯಿಂದ ಗ್ಯಾಸ್ ಹಂಡೆ‌ ಕದ್ದ ಖದೀಮರು – ಪೋಲೀಸ್ ದೂರು

0

ದೊಡ್ಡತೋಟದ ಗೂಡಂಗಡಿಯೊಂದರಿಂದ ಗ್ಯಾಸ್ ಹಂಡೆಯನ್ನು‌ ಕದ್ದೊಯ್ದ ಘಟನೆ ಆ.2ರ ರಾತ್ರಿ ವರದಿಯಾಗಿದೆ.

ದೊಡ್ಡತೋಟದಿಂದ ಮರ್ಕಂಜ ಕಡೆಗೆ ತಿರುಗುವಲ್ಲಿ ಮರ್ಕಂಜದ ಉಪೇಂದ್ರ ಪುರುಷ ಮಿತ್ತಡ್ಕ ಎಂಬವರು ಗೂಡಂಗಡಿ ನಡೆಸುತ್ತಿದ್ದಾರೆ. ಇವರ ಗೂಡಂಗಡಿಯ ಒಂದು ಭಾಗದಿಂದ ಕಳ್ಳರು ಒಳ ನುಗ್ಗಿ ಗ್ಯಾಸ್ ಹಂಡೆ‌ ಕದ್ದೊಯ್ದಿದ್ದಾರೆ‌. ಘಟನೆಯ ಬಗ್ಗೆ ಉಪೇಂದ್ರರವರು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ.