ಸಾರಿಗೆ ಬಸ್ ಒದಗಿಸಿ ಕೊಡುವ ಕುರಿತು ಸಾರಿಗೆ ಇಲಾಖೆಗೆ ಸಚಿನ್ ರಾಜ್ ಶಟ್ಟಿಯವರಿಂದ ಮನವಿ

0

ಬೆಳ್ಳಾರೆಯಿಂದ ಬೆಳಿಗ್ಗೆ ಮಂಗಳೂರಿಗೆ ಮತ್ತು ಕಲ್ಪಣೆ ಗೆ ಸರಕಾರಿ ಬಸ್ಸು ಬರುವಂತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗ ನಿಯಂತ್ರಣಾಧಿಕಾರಿಗೆ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಡಿಯವರು ಮನವಿ ನೀಡಿದ್ದಾರೆ.


ಮನವಿಯಲ್ಲಿ ಮಂಗಳೂರಿನಿಂದ ಸಂಜೆ 6.30ಕ್ಕೆ ಹೊರಟು ಮತ್ತೂರಿಗೆ ರಾತ್ರಿ 8.00 ಗಂಟೆಗೆ ತಲುಪಿ ಇದೇ ಬಸ್ಸನ್ನು ಮಾಡಾವು ಮೂಲಕ ಬೆಳ್ಳಾರೆಗೆ ಬಂದು ತಂಗುವಂತೆ ಮರುದಿವಸ ಬೆಳಗ್ಗೆ 6.30ಕ್ಕೆ ಮಾಡಾವು ಮೂಲಕ ಮಂಗಳೂರಿಗೆ ಹೋಗುವಂತೆ ತುರ್ತಾಗಿ ಸಾರಿಗೆ ಬಸ್ಸನ್ನು ಒದಗಿಸಿ ಕೊಡುವಂತೆ ಮತ್ತು ಮತ್ತೂರಿನಿಂದ ಬೆಳಿಗ್ಗೆ ಗಂಟೆ 7.30ಕ್ಕೆ ಹೊರಟು ಸವಣೂರು ಪೆರುವಾಜೆ ಮೂಲಕ ಬೆಳ್ಳಾರೆಗೆ ಬರುವ ಸಾರಿಗೆ ಬಸ್‌ ಕಲ್ಪಣೆವರೆಗೂ ಹೋಗುತ್ತಿದ್ದು, ಆದರೆ ಇದೀಗ ಕಲ್ಪಣೆಗೆ ಸಾರಿಗೆ, ಬಸ್ ಹೋಗದೆ ಇರುವುದರಿಂದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದ್ದು, ಈ ಸಾರಿಗೆ ಬಸ್ಸನ್ನು ಕಲ್ಪಣೆವರೆಗೆ ಮರು ಪ್ರಾರಂಭಿಸುವಂತೆ ಸಂಜೆ ಪೆರ್ಲಂಪಾಡಿ ಮೂಲಕ ಬೆಳ್ಳಾರೆಗೆ ಬಂದು ಹೋಗುವ ಸಾರಿಗೆ ಬಸ್ಸನ್ನು ಕಲ್ಪವರೆಗೆ ಸಂಚರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.