ಶೇಣಿ: ಐರೋಳ್ ಹಣ್ಣಿನ ಶರಬತ್ತು ಕುಡಿದು ಮಹಿಳೆ ಮೃತ್ಯು

0



ಕಾಡಿನಲ್ಲಿ ಸಿಗುವ ಐರೋಳ್ ಹಣ್ಣನ್ನು ಸೇವಿಸಬಹುದಾದ ವಸ್ತು ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ತಂದೆ ಹಾಗೂ ಮಗಳಲ್ಲಿ ಮಗಳು ಸಾವನ್ನಪ್ಪಿದ ಘಟನೆ ಅ. ೨ರಂದು ವರದಿಯಾಗಿದೆ.
ಅಮರಪಡ್ನೂರು ಗ್ರಾಮದ ಕುಳ್ಳಾಜೆ ಎಂಬಲ್ಲಿಯ ಮೂರು ಮಕ್ಕಳ ತಾಯಿ ಲೀಲಾವತಿ ಹಾಗೂ ಅವರ ತಂದೆ ಒಂದು ವಾರದ ಹಿಂದೆ ಮೈರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದರು ಎನ್ನಲಾಗಿದೆ. ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾದರು. ಅವರಲ್ಲಿ ಮಗಳು ಮೂರು ಮಕ್ಕಳ ತಾಯಿಯಾಗಿರುವ ಸುಮಾರು ೩೫ ವರ್ಷ ಪ್ರಾಯದ ಲೀಲಾವತಿಯವರಿಗೆ ವಾಂತಿ, ಭೇದಿ ಆರಂಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು. ಆದರೆ ಅಸೌಖ್ಯ ತೀವ್ರಗೊಂಡು ಅ. ೨ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದರು.
ಮೃತರು ಪತಿ ಜಗನ್ನಾಥ ನಾಯ್ಕ ದೊಡ್ಡೇರಿ, ಪುತ್ರರಾದ ಯತೀಶ್, ಯಶ್ವಿನ್, ಪುತ್ರಿ ಅಮೂಲ್ಯ ತಂದೆ ಲೋಕಯ್ಯ ನಾಯ್ಕ ಕುಳ್ಳಾಜೆ, ತಾಯಿ ಶ್ರೀಮತಿ ಸರೋಜ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.