ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕೊನೆಗೂ ಬೆಂಚ್ ಅಳವಡಿಕೆಗೆ ಮುಂದಾದ ಇಲಾಖೆ

0

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೇರುಗಳು ಕೆಲವು ತುಂಡಾಗಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಮಸ್ಯೆ ಉಂಟಾಗಿತ್ತು.
ಈ ಸಮಸ್ಯೆಯ ಬಗ್ಗೆ ಸುದ್ದಿ ಪತ್ರಿಕೆ ಮತ್ತು ವೆಬ್ಸೈಟ್ ಚಾನೆಲ್ಗಳಲ್ಲಿ ವರದಿಯನ್ನು ಮಾಡಲಾಗಿತ್ತು.

ಇದೀಗ ಇದಕ್ಕೆ ಸ್ಪಂದಿಸಿರುವ ಇಲಾಖೆ ಕಬ್ಬಿಣದ ಚೇರುಗಳು ತುಂಡಾಗಿ ಖಾಲಿ ಇರುವ ಸ್ಥಳಗಳಲ್ಲಿ ನೂತನವಾಗಿ ಕಲ್ಲಿನ ಬೆಂಚುಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.

ನಾಲ್ಕು ಮಂದಿ ಕುಳಿತುಕೊಳ್ಳಲು ಸಹಾಯಕವಾಗುವ ಸುಮಾರು ನಾಲ್ಕು ಬೆಂಚುಗಳನ್ನು ಅಳವಡಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.