ಪಂಜ :ರೈತ ಶಾಮಿಯಾನ ಎರಡನೇ ವರ್ಷಕ್ಕೆ ಪಾದಾರ್ಪಣೆ

0

ನಿವೃತ್ತ ಪಿ.ಡಿ.ಒ ಪುರುಷೋತ್ತಮ ಮಣಿಯಾನ ರವರಿಗೆ ಸನ್ಮಾನ ಪಂಜದ ಚರ್ಚ್ ಗೇಟ್ ಬಳಿ ಪೈಸಾರಿ ಕಾಂಪ್ಲೆಕ್ಸ್ ನಲ್ಲಿರುವ ರೈತ ಶಾಮಿಯಾನ ಇದರ ಎರಡನೇ ವರುಷಕ್ಕೆ ಪಾದಾರ್ಪಣೆ ಪ್ರಯುಕ್ತ ಅ.21 ಮುಂಜಾನೆ ಗಣಹೋಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ ಮತ್ತು ಶ್ರೀಮತಿ ಸ್ನೇಹಲತಾ ದಂಪತಿಗಳನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣ ಪೈಸಾರಿ ಮತ್ತು ಶ್ರೀಮತಿ ಮಮತಾ ದಂಪತಿಗಳ ಹಾಗೂ ಪದ್ಮನಾಭ ಏನಡ್ಕ ಮತ್ತು ಶ್ರೀಮತಿ ವಿಜಯ ದಂಪತಿಗಳ ವಿವಾಹ ವಾರ್ಷಿಕೋತ್ಸವ , ಪವನ್ ಮೂಲೆಮನೆ ಯವರ ಹುಟ್ಟು ಹಬ್ಬವನ್ನು ಇದೇ ವೇದಿಕೆಯಲ್ಲಿ ಆಚರಿಸಲಾಯಿತು. ಬಾಲಕೃಷ್ಣ ಮೂಲೆಮನೆ ಮತ್ತು ಶ್ರೀಮತಿ ನೇತ್ರಾವತಿ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಪ್ಪ ಗೌಡ ಚಿದ್ಗಲ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮೂಲೆಮನೆ ಸ್ವಾಗತಿಸಿದರು.ಪುರುಷೋತ್ತಮ ಕಾಯಂಬಾಡಿ ಪ್ರಾರ್ಥಿಸಿದರು.ಸೋಮಶೇಖರ ನೇರಳ ನಿರೂಪಿಸಿದರು. ಪವನ್ ಮೂಲೆಮನೆ ವಂದಿಸಿದರು.