ದುಗ್ಗಲಡ್ಕ: ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಆಯುಧಪೂಜೆ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಷ್ಠಮಿಯ ದಿನವಾದ ಇಂದು ದುರ್ಗಾಪೂಜೆ, ಆಯುಧಪೂಜೆ ಮತ್ತು ನವಾನ್ನ ಭೋಜನ ನಡೆಯಿತು.
ಬೆಳಿಗ್ಗೆ ದುರ್ಗಾಪೂಜೆ ಪ್ರಾರಂಭಗೊಂಡು ಬಳಿಕ ಆಯುಧಪೂಜೆ ನಡೆಯಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾಧಾಕೃಷ್ಣ ಭಟ್ ಜೋಗಿಯಡ್ಕ ಮತ್ತು ಬಳಗದವರು ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್ ಕೊಡೆಂಚಡ್ಕ, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ಪದಾಧಿಕಾರಿಗಳಾದ ಯತೀಶ್ ರೈ ದುಗ್ಗಲಡ್ಕ, ದಿನೇಶ್ ಡಿ.ಕೆ‌.,ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ, ಶ್ರೀಮತಿ ಶಶಿಕಲಾ ಎ.ನೀರಬಿದಿರೆ,ದೈವಸ್ಥಾನದ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ, ಯುವ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ,ಸಮಿತಿಗಳ ಸದಸ್ಯರು ಹಾಗೂ ಊರ,ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.