ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಸೆ.19 ರಂದು ನಿಧನರಾದ ಶ್ರೀಮತಿ ಸುಂದರಿ ಕೈಪೆಬೆಲು ರವರ ಮರಣ ಸಾಂತ್ವನ ನಿಧಿ ರೂ.10000/- ವನ್ನು ಪುತ್ರರಾದ ನಾರಾಯಣ, ಮೋಹನ, ಕೃಷ್ಣ ರವರಿಗೆ ಸೆ.19ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಶ್ರೀಮತಿ ಶಾರದಾ ಡಿ.ಶೆಟ್ಟಿ ಸಂಘದ ಸದಸ್ಯರಾದ ಭರತ್ ಮಾಣಿಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಉಪಸ್ಥಿತರಿದ್ದರು.