ಬೆಳ್ಳಿಪಾಡಿಯಲ್ಲಿ ಸತ್ಸಂಗ ಕಾರ್ಯಕ್ರಮ

0


ಶ್ರೀ ಶಾರದಾಂಬ ಭಜನಾ ಮಂದಿರ ಬೆಳ್ಳಿಪಾಡಿಯಲ್ಲಿ ಆರ್ಟ್ ಓಫ್ ಲಿವಿಂಗ್ ವತಿಯಿಂದ ಶ್ರೀ ಸೂರ್ಯಪಾದ ಸ್ವಾಮೀಜಿಯವರಿಂದ ಸತ್ಸಂಗ ಕಾರ್ಯಕ್ರಮವು ಜರುಗಿತು. ರಮ್ಯಾ ಸುಧೀಂದ್ರ ಭಟ್ ದೇರ್ಕಜೆ ಸ್ವಾಮೀಜಿಯವರನ್ನು ಪಾದಪೂಜೆ ಮಾಡಿ ಬರಮಾಡಿಕೊಂಡರು.

ಆರ್ಟ್ ಓಫ್ ಲಿವಿಂಗ್ ಶಿಕ್ಷಕರಾದ ನಾರಾಯಣ ಮಾಸ್ತರ್, ಕೇಶವ ಕುತ್ತಿಮುಂಡ, ಚಂದ್ರಶೇಖರ್ ತೋಟ, ಜನಾರ್ದನ ನಾಯಕ್ ಕೋಟಿಗದ್ದೆ, ಗೋಪಾಲಯ್ಯ ಕೋಟಿಗದ್ದೆ, ಶಿವರಾಮ್ ತೋಟ, ತಿರುಮಲೇಶ್ವರ್ ತೋಟ, ಕುಸುಮ ವೀರಪ್ಪ ಸುವರ್ಣ ನಡುಬೈಲ್, ವಿದ್ಯಾನಂದ ಭಟ್ ಕಕ್ಕೆ ಬೆಟ್ಟು, ಪೂರ್ಣಿಮಾ ಬನಾರಿ, ಶ್ವೇತ ರಮೇಶ್ ಬೆಳ್ಳಿಪಾಡಿ ಊರ ಹಾಗೂ ಪರವೂರ ಸಾಧಕರು ಉಪಸ್ಥಿತರಿದ್ದರು.